ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಡಿ. ಎನ್. ದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಇರುವ “ರಾಷ್ಟ್ರಕವಿ ಕುವೆಂಪು ರಂಗ ಮಂದಿರ” ಶಿಥಿಲಗೊಂಡಿದ್ದು, ಬಿದ್ದು ಮುಂದೆ ಅಗುವ ಅನಾಹುತ ತಪ್ಪಿಸಿ, ಡಿ.ಎನ್ ದೊಡ್ಡಿ ಗ್ರಾಮ ಪಂಚಾಯಿತಿ ಎಚ್ಚೆತ್ತು ನೂತನ ರಂಗಮಂದಿರ ಸಿದ್ದಮಾಡಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸಹಕಾರಿಯಾಗುವ ಮೂಲಕ ಊರಿನ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಬೇಕೆಂದು ವಿಶ್ವಮಾನವ ಕುವೆಂಪು ಫೌಂಡೇಶನ್ ಒತ್ತಾಯಿಸುತ್ತಿದೆ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ ಮಾಲೂರು ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ದೊಡ್ಡಿ ಪ್ರವೀಣ್ ರವರು ಮಾತನಾಡಿ “ಡಿ.ಎನ್.ದೊಡ್ಡಿ ಸರ್ಕಾರಿ ಫ್ರೌಡ ಶಾಲಾ ಆವರಣದ ಒಳಗೆ ಇರುವ ಈ ಕುವೆಂಪು ರಂಗಮಂದಿರ ಸಂಪೂರ್ಣವಾಗಿ ಶಿಥಿಲವಾಗಿದೆ. ಇದರ ಪಕ್ಕದಲ್ಲಿಯೇ ಆಹಾರ (ಅನ್ನ ದಾಸೋಹ ಕೇಂದ್ರ) ಇದ್ದು, ಮಧ್ಯಾಹ್ನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಅದರ ಸಮೀಪವೇ ಓಡಾಡುತ್ತಿರುತ್ತಾರೆ, ಕಟ್ಟಡ ಆಗಲೋ-ಈಗಲೋ ಕುಸಿಯುವ ಸಾಧ್ಯತೆ ಇದೆ, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇದುವರೆಗೂ ಯಾವುದೇ ಕ್ರಮ ಕೈಕೊಂಡಿಲ್ಲ. ಈಗಲಾದರೂ ಈ ಕಟ್ಟಡವನ್ನು ಕೂಡಲೇ ತೆರವು ಗೊಳಿಸಿ,ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕಾಗಿ” ಒತ್ತಾಯಿಸುತ್ತಿದ್ದೇವೆ.
ಡಿ.ಎನ್.ದೊಡ್ಡಿ ಗ್ರಾಮಸ್ಥರು ಹೇಳುವುದೆನೆಂದರೆ ಕುವೆಂಪು ರಂಗಮಂದಿರ ಸಂಪೂರ್ಣ ಶಿಥಿಲಗೊಂಡಿದ್ದು ಕೂಡಲೇ ಅದನ್ನು ತೆರವು ಮಾಡಿ, ಹೊಸ ಕಟ್ಟಡ ಕಟ್ಟಿಕೋಡುವ ಮೂಲಕ ವಿದ್ಯಾರ್ಥಿಗಳ ಹಿತವನ್ನು ಗ್ರಾಮಸ್ಥರ ಮನವಿಯನ್ನು ಕಾಯ್ದುಕೊಳ್ಳಬೇಕಾಗಿದೆ. ಕೂಡಲೇ ಇದಕ್ಕೆ ಒಂದು ಕಾಯಕಲ್ಪ ನೀಡಿ ಸಹಕರಿಸಿ” ಎನ್ನುತ್ತಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.