ದೋಹ (www.vknews.com) : ಕತಾರ್ ಇಂಡಿಯನ್ ಸೋಷಿಯಲ್ ಫೋರಮ್, ಕರ್ನಾಟಕ ರಾಜ್ಯ ಘಟಕದ, ದೋಹ ಬ್ಲಾಕ್ ಮತ್ತು ದಫ್ನ ಬ್ಲಾಕ್ ಗಳ, 2021-2024 ನೇ ಅವಧಿಗೆ, ನೂತನ ಪದಾಧಿಕಾರಿಗಳ ಆಯ್ಕೆಗೆ, ಚುನಾವಣಾ ಪ್ರಕ್ರಿಯೆಯು ನಡೆಯಿತು.
ದೋಹ ಬ್ಲಾಕ್ ನ ಅಧ್ಯಕ್ಷರಾಗಿ ಅನ್ವರ್ ಅಂಗರಗುಂಡಿ, ಉಪಾಧ್ಯಕ್ಷರಾಗಿ ಅಶ್ರಫ್ ಗೇರುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅತೀಖ್ ಮಡಿಕೇರಿ, ಕಾರ್ಯದರ್ಶಿಗಳಾಗಿ ಇಮ್ರಾನ್ ಸುನ್ನತ್ಕೆರೆ ಮತ್ತು ಇಬ್ರಾಹಿಮ್ ಸುಳ್ಯ, ಸದಸ್ಯರಾಗಿ ಅನ್ವರ್ ಬೋಲ್ಯಾರ್ ಹಾಗೂ ಇರ್ಫಾನ್ ಅಡ್ಯಾರ್ ಚುನಾಯಿತರಾದರು.
ದಫ್ನ ಬ್ಲಾಕ್ ನ ಅಧ್ಯಕ್ಷರಾಗಿ ಖಲಂದರ್ ಜಲಸೂರ್, ಉಪಾಧ್ಯಕ್ಷರಾಗಿ ರಫೀಖ್ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾಗಿ ಅಫ್ರಿದಿ ಮಂಗಳೂರು ಮತ್ತು ಫಹೀಮ್ ಬಂಟ್ವಾಳ, ಸದಸ್ಯರಾಗಿ ಖಾಲಿದ್ ಬನ್ನೂರು ಹಾಗೂ ಅಬೂಬಕರ್ ಜೋಕಟ್ಟೆ ಚುನಾಯಿತರಾದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಜ಼ಕರಿಯಾ ಪಾಂಡೇಶ್ವರ, ಅಶ್ರಫ್ ಪುತ್ತೂರು ರವರ ಸಹಯೋಗದೊಂದಿಗೆ ನೆರವೇರಿಸಿದರು.
ನೂತನವಾಗಿ ಆಯ್ಕೆಯಾದ ನಾಯಕರಿಗೆ, ನಾಯಕರ ಗುಣ ಹೇಗಿರಬೇಕು ಮತ್ತು ನಾಯಕರ ಜವಾಬ್ದಾರಿ ಏನು ಎಂಬುದರ ಬಗ್ಗೆ, ದೋಹ ವಲಯಾಧ್ಯಕ್ಷರಾದ ವಜೀ಼ರ್ ಪುಂಜಾಲಕಟ್ಟೆ ಮನವರಿಕೆ ಮಾಡಿಕೊಟ್ಟರು. ಕರ್ನಾಟಕ ರಾಜ್ಯಾಧ್ಯಕ್ಷರಾದ ನಜೀ಼ರ್ ಪಾಷ ಮಾತನಾಡಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯವೈಖರಿಯ ಬಗ್ಗೆ ವಿವರಿಸಿ, ನೂತನ ಪದಾಧಿಕಾರಗಳು ಸಮಾಜ ಸೇವೆಯನ್ನು ತಮ್ಮ ಪ್ರಾಥಮಿಕ ಗುರಿಯಾಗಿರಿಸಿಕೊಂಡು, ನಿಷ್ಪಕ್ಷಪಾತ ಜನಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ದಫ್ನ ವಲಯಾಧ್ಯಕ್ಷರಾದ ಇಬ್ರಾಹಿಮ್ ಯು. ಬಿ., QISF ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಇಂತಿಯಾಜ಼್ ಕಾರ್ನಾಡ್, IFF ಕರ್ನಾಟಕ ರಾಜ್ಯಾಧ್ಯಕ್ಷರಾದ ಇರ್ಫಾನ್ ಕಾಪು ಉಪಸ್ಥಿತರಿದ್ದರು.
IFF ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಸಲೀಂ ಬಂಗಾಡಿ, ದಫ್ನ ಮತ್ತು ದೋಹ ವಲಯಗಳ ಇತರ ಪದಾಧಿಕಾರಿಗಳಾದ ಇರ್ಷಾದ್ ಕುಳಾಯಿ, ಅಯ್ಯೂಬ್ ಉಳ್ಳಾಲ, ಅಬೂಬಕರ್ ಸಿದ್ದೀಖ್, ಫಾರೂಕ್ ಬೋಲೆನ್ತೂರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಕಿರ್ ಪುಂಜಾಲಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.