ಕೋಲಾರ (ವಿಶ್ವ ಕನ್ನಡಿಗ ನ್ಯೂಸ್ ) : 2021-22ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಕೆಳಕಂಡವರು ಆಯ್ಕೆಯಾಗಿದ್ದಾರೆ .
ಶಿಕ್ಷಣ ಕ್ಷೇತ್ರದಿಂದ ನರಸಿಂಹಯ್ಯ , ಕುಲುಮೆ ಕ್ಷೇತ್ರದಿಂದ ಶ್ರೀನಿವಾಸಚಾರಿ , ವೈದ್ಯಕೀಯ ಕ್ಷೇತ್ರದಿಂದ ಡಾ || ಹರೀಶ್ , ಸಾಹಿತ್ಯ ಕ್ಷೇತ್ರ ದಿಂದ ಸ.ರಘುನಾಥ , ಸಂಗೀತ ಕ್ಷೇತ್ರದಿಂದ ವೆಂಕಟೇಶ್ವರ ಅಪ್ಪಿಗೆರೆ , ಪತ್ರಿಕೋದ್ಯಮ ಕ್ಷೇತ್ರದಿಂದ ಎಚ್.ಕೆ.ರಾಘವೇಂದ್ರ , ವಿಶ್ವಕುಂದಾಪುರ , ಶಿಲ್ಪಕಲೆ ಈಶ್ವರಾಚಾರ್ಯ , ಬೆಂಕಿಕರಗ ಎಂ ಕೃಷ್ಣಪ್ಪ , ಕನ್ನಡ ಪರ ಹೋರಾಟ ಅಶೋಕ್ ಲೋಣಿ , ಜಾನಪದ ಬೀದಿನಾಟಕ ಮೋತಕಪಲ್ಲಿ ರತ್ನಮ್ಮ , ಕನ್ನಡ ಪರ ಸುಲೇಮಾನ್ ಖಾನ್ , ರೈತ ಮಹಿಳೆ ಶ್ರೀನಿವಾಸಪುರ ರತ್ನಮ್ಮ , ಯೋಗ ನ್ಯಾಯವಾದಿ ಬಿಸಪ್ಪ ಗೌಡ ರವರು ಪ್ರಶಸ್ತಯಿಗೆ ಆಯ್ಕೆಯಾಗಿದ್ದಾರೆ .
2021-22ನೇ ಸಾಲಿನಲ್ಲಿ ದಿನಾಂಕ : 01 11-2021ರಂದು ಬೆಳಗ್ಗೆ 10.30 ಗಂಟೆಗೆ ಕೋಲಾರ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ನಾಡಿನ ಸಂಸ್ಕೃತಿಗಳನ್ನು ಸಾರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಜಿಲ್ಲಾಡಳಿತ ಹಾಗೂ ಭುವನೇಶ್ವರಿ ಕನ್ನಡಸಂಘ , ಕನ್ನಡ ಪರ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿವನ , ಎಂ.ಜಿ.ರಸ್ತೆ , ಕೋಲಾರ ಇಲ್ಲಿ ಆಚರಿಸಲಾಗುತ್ತಿದೆ . ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ . ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.