ಫರಂಗಿಪೇಟೆ (www.vknews.com) : ಸುಮಾರು 50 ವರ್ಷಗಳಿಂದ ನವೀಕರಣಗೊಳ್ಳದ ಬದ್ರಿಯಾ ಜುಮ್ಮಾ ಮಸೀದಿ ಅಮೆಮಾರ್ ಇಲ್ಲಿನ ಮಸೀದಿ ಪುನರ್ ನವೀಕರಣವಾಗಿ ಇತ್ತೀಚೆಗೆ ಉದ್ಘಾಟನೆಗೊಂಡಿದೆ ಇದರ ಸಮಾರೋಪ ಸಮಾರಂಭದ ಅಂಗವಾಗಿ ಡಿ.13 ರಂದು ಅಮೆಮಾರ್ ತಂಡೇಲ್ ಗ್ರೌಂಡ್ ನಲ್ಲಿ ಎ. ಎಮ್ ನೌಶಾದ್ ಬಾಖವಿಯವರಿಂದ ಏಕದಿನ ಪ್ರವಚನ ಮತ್ತು ಸಾಮಾಜಿಕ ರಾಜಕೀಯ ಧಾರ್ಮಿಕ ನಾಯಕರುಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಖತೀಬ್ ಅಬ್ದುಲ್ ಲೆತೀಫ್ ಹನೀಫಿ ಉದ್ಘಾಟನೆ ಮಾಡಲಿದ್ದಾರೆ, ಅತಾವುಲ್ಲ ತಂಗಳ್ ಉದ್ಯಾವರ ದುವಾ ಆಶೀರ್ವಾಚನ ನೀಡಲಿದ್ದಾರೆ ಎಂದು ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.