ಮಂಗಳೂರು (www.vknews.com) : ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಇವರ ಪ್ರತಿಷ್ಠಿತ ಜಿನ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಭಾನುವಾರ(2/1/2022) ಜೈನ ಸಮಾಜದ ಕಲಾವಿದರಿಂದ ಸಾಂಸ್ಕೃತಿಕ ಸಮ್ಮಿಲನ -2022 ಕಾರ್ಯಕ್ರಮ ಅನ್ ಲೈನ್ ಮೂಲಕ ಅದ್ದೂರಿಯಾಗಿ ಜರಗಿತು.ಮೂಲ್ಕಿ ಸೀಮೆಯ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು ಮೂಲ್ಕಿ ಅರಮನೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಝಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಖ್ಯಾತಿಯ, ಚಲನಚಿತ್ರ ನಟ ಪ್ರವೀಣ್ ಜೈನ್, ಬೆಂಗಳೂರಿನ ಮೆಟ್ರೋ ರೈಲಿನ ಆಪರೇಟರ್ ಕವಿತಾ ಮಂಜಯ್ಯ ಜೈನ್ ಸಾಗರ, ರಾಜ್ಯ- ರಾಷ್ಟ್ರ ಪ್ರಶಸ್ತಿ ವಿಜೇತೆ ಬಹುಮುಖ ಪ್ರತಿಭೆ ಪಂಚಮಿ ಮಾರೂರು ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಕಾಶ್ ಜೈನ್ ಬೆಳಗಾವಿ, ವಸಂತ್ ಕುಮಾರ್ ಬಂಗ ಕಾರ್ಕಳ, ಅನನ್ಯ ರಂಜನಿ ಮೂಡುಬಿದಿರೆ, ಸಮ್ಯಕ್ತ್ ಜೈನ್ ಕಡಬ, ಪ್ರಾಪ್ತಿ ಜೈನ್ ಪುಣೆ, ಮೌಲ್ಯ ವೈ ಜೈನ್ ಮೂಡುಬಿದಿರೆ, ದಿಶಾ ಎಸ್. ಜೈನ್ ಮಂಡ್ಯ, ಶ್ರೀಮನ್ಮ ಬಲ್ಲಾಳ್ ಪದ್ಮುಂಜ, ಪ್ರಥಮ್ ಮಾರೂರು, ಸೌಮ್ಯ ಎಸ್.ಜೈನ್ ಬಲಿಗೆ, ಶ್ವೇತಾ ಪಿ.ಜೈನ್ ಮೇಗುಂದ,ಅರ್ಚಿತ್ ಎ. ಜೈನ್ ಸಂಸೆ, ನಿತ್ಯ ಡಿ.ಜೈನ್ ಹೊರನಾಡು, ಚಿಂತನಾ ಡಿ.ಜೈನ್ ಹೊರನಾಡು, ನಿಶ್ಚಿತಾ ಡಿ .ಜೈನ್ ಹೊರನಾಡು, ದಿಶಾನ್ ಸಿ. ಜೈನ್ ಬೇಲೂರು,ಅಭೀಷ್ಟ ಅಧಿಕಾರಿ ಕಾರ್ಕಳ,ಸಂಪ್ರತಿ ಜೈನ್ ಕಾರ್ಕಳ,ಶ್ರೀಯ ಜೈನ್ ಕಾರ್ಕಳ, ತನಯ್ ಜೈನ್ ಈದು ಹೊಸ್ಮಾರು ಹಾಗೂ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಸದಸ್ಯರು ಪಾಲ್ಗೊಂಡಿದ್ದರು.
ನಿರಂಜನ್ ಜೈನ್ ಕುದ್ಯಾಡಿ ಪ್ರಸ್ತಾವನೆ ಸಲ್ಲಿಸಿದರು, ಶ್ವೇತಾ ಎಸ್.ಜೈನ್ ಕಾರ್ಕಳ ನಿರೂಪಿಸಿದರು, ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು.ಶ್ರೇಯಾ ಎಸ್. ಜೈನ್ ಮಂಗಳೂರು, ಪ್ರಜ್ವಲ್ ಜೈನ್ ಚಾಮರಾಜನಗರ, ಅಕ್ಷಯ್ ಜೈನ್ ಕೆರ್ವಾಶೆ, ಸಹಕರಿಸಿದರು. ಅಶ್ವತ್ ಕುಮಾರ್ ಜೈನ್ ಶ್ರೀಲಂಕಾ, ಚಿತ್ತಾ ಜಿನೇಂದ್ರ ಎಂ.ಎಂ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.