ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಪ್ರವಾಸದಲ್ಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಜೊತೆಗಿದ್ದರು.
ಕೇರಳದ ಅಭಿವೃದ್ಧಿಗೆ ಯುಎಇ ನೀಡಿದ ಬೆಂಬಲಕ್ಕೆ ಮುಖ್ಯಮಂತ್ರಿ ಧನ್ಯವಾದ ಅರ್ಪಿಸಿದರು. ಉತ್ತಮ ಉದ್ಯಮ ಸ್ನೇಹಿ ವಾತಾವರಣವನ್ನು ಸಿದ್ಧಪಡಿಸುತ್ತಿರುವ ಕೇರಳದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಅವರು ಉಪಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಯುಎಇ ಉಪ ಪ್ರಧಾನಿ, ಹಣಕಾಸು ಸಚಿವ ಮತ್ತು ದುಬೈನ ಉಪ ಆಡಳಿತಗಾರ ಶೇಖ್ ಮಕ್ತೂಮ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಅಂತಾರಾಷ್ಟ್ರೀಯ ಸಹಕಾರ ಮತ್ತು ಎಕ್ಸ್ ಪೋ ಮಹಾ ನಿರ್ದೇಶಕ ರೀಮ್ ಬಿಂಟ್ ಇಬ್ರಾಹಿಂ ಅಲ್ ಹಶೇಮಿ, ಎಮಿರೇಟ್ಸ್ ಏರ್ ಲೈನ್ಸ್ ಗ್ರೂಪ್ ಅಧ್ಯಕ್ಷ ಮತ್ತು ದುಬೈ ನಾಗರಿಕ ವಿಮಾನಯಾನ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೂಮ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೈಗಾರಿಕಾ ಸಚಿವ ಪಿ.ರಾಜೀವ್, ಭಾರತೀಯ ರಾಯಭಾರಿ ಸಂಜಯ್ ಸುಧೀರ್, ಕಾನ್ಸುಲ್ ಜನರಲ್ ಅಮನ್ ಪುರಿ ಮತ್ತು ಲುಲು ಗ್ರೂಪ್ ಅಧ್ಯಕ್ಷ ಮತ್ತು ಅಬುಧಾಬಿ ಚೇಂಬರ್ ಉಪಾಧ್ಯಕ್ಷ ಎಂ.ಎ.ಯೂಸುಫ್ ಅಲಿ ಕೇರಳ ಸಿಎಂ ಜೊತೆಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.