ವಿ.ಕೆ.ನ್ಯೂಸ್ (ಮಾಲೂರು):.ಮಾಲೂರು ಪಟ್ಟಣ್ಣದ ಹೊರವಲಯದಲ್ಲಿನ ರೈಲ್ವೇನಿಲ್ದಾಣದ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಮುಖ್ಯಸ್ಥರಾದ ಗೌಸಿಯಾ ನುಸ್ರತ್ ನಿಸಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ.
ಪ್ರಸ್ತುತ ಶ್ರೀಮತಿ ಗೌಸಿಯಾ ನುಸ್ರತ್ ನಿಸಾರ್ ರವರು ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು. ಇಂಗ್ಲಿಷ್ ವಿಭಾಗದಲ್ಲಿ ಡಾಕ್ಟರೇಟ್ ಪಡೆದಿರುವುದು ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಇವರ ಮಾರ್ಗದರ್ಶಕರಾಗಿ ಆಂಗ್ಲ ಭಾಷೆಯ ಪ್ರವೀಣರಾಗಿರುವ ಪ್ರೊ.ಗೀತಾ ಭಾಸ್ಕರ್ ರವರು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಣೆ ಮಾಡಿ “ಮಾಲೂರಿನಲ್ಲಿರುವ ಗ್ರಾಮೀಣ ಯು.ಜಿ ಕಾಲೇಜುಗಳಲ್ಲಿ ಇಂಗ್ಲಿಷ್ ಭಾಷೆ ಭೋದನೆಯಲ್ಲಿನ ಪ್ರಸ್ತುತ ಸಮಸೈಗಳು ಹಾಗೂ ಬರವಣಿಗೆಯನ್ನು ಸುಧಾರಿಸಲು ಸಲಹೆಗಳು” ಎಂಬ ವಿಷಯವನ್ನು ಕ್ರಮಬದ್ದತೆಯಿಂದ ಮಂಡಿಸುವ ಮೂಲಕ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ಡಾಕ್ಟರೇಟ್ ಪದವಿ ಪಡೆದಿರುವ ಶ್ರೀಮತಿ ಗೌಸಿಯಾ ನುಸ್ರತ್ ನಿಸಾರ್ ರವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೈ.ವೆಂಕಟೇಶ್, ಕಾಲೇಜಿನ ವಿವಿಧ ವಿಭಾಗಗಳ ಎಲ್ಲಾ ಮುಖ್ಯಸ್ಥರುಗಳು, ಪ್ರಾಧ್ಯಪಕರು, ಅತಿಥಿ ಉಪನ್ಯಾಸಕರು, ಹಳೆ ವಿದ್ಯಾರ್ಥಿ ಸಂಘ, ವಿಶ್ವಮಾನವ ಕುವೆಂಪು ಫೌಂಡೇಶನ್, ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯ) ಅಭಿನಂದನೆಗಳನ್ನು ಸಮರ್ಪಿಸಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.