ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ನಿಝ್ವಾ ಝೋನ್ ಅಧೀನದ ಫರ್ಕ್ ಸೆಕ್ಟರ್ ನ ವಾರ್ಷಿಕ ಮಹಾ ಸಭೆಯು ಅಬ್ದುಲ್ ಹಮೀದ್ ಕಣ್ಣಂಗಾರ್ ರವರ ನಿವಾಸದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹುಸೈನ್ ರವರ ಅಧ್ಯಕ್ಷತೆಯಲ್ಲಿ ಬಹು ಅಬ್ದುರ್ರಹ್ಮಾನ್ ಸಖಾಫಿ ರವರ ದುವಾದೊಂದಿಗೆ ಆರಂಭವಾದ ಸಭೆಯನ್ನು ಫರ್ಕ್ ಸೆಕ್ಟರ್ ಶಿಕ್ಷಣ ಕಾರ್ಯದರ್ಶಿ ರಮೀಝ್ ಕಟಪಾಡಿ ಸ್ವಾಗತಿಸಿ ಫೈಝಲ್ ಕಣ್ಣಂಗಾರ್ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷರು ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ ರವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವಾಚಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು. 2021-22ನೇ ಅವದಿಯ ಸಮಿತಿ ಯನ್ನು ಬರ್ಕಾಸ್ತು ಗೊಳಿಸಿ ಝೋನ್ RO ಕಲಂದರ್ ಬಾಷಾ ತೀರ್ಥಹಳ್ಳಿ ಹಾಗೂ ಸಾದಿಕ್ ಕೈಕಂಬ ರವರು 2022-2023ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ ಉಪಾಧ್ಯಕ್ಷರಾಗಿ ರಮೀಝ್ ಕಟಪಾಡಿ ಪ್ರಧಾನ ಕಾರ್ಯದರ್ಶಿಯಾಗಿ ಕಬೀರ್ ಉಳ್ಳಾಲ ರವರನ್ನು ಮತ್ತು ಕೋಶಾಧಿಕಾರಿ ಯಾಗಿ ಹಮೀದ್ ಕಂಣ್ಣಗಾರ್ ರವರನ್ನು ಆರಿಸಲಾಯಿತು. ಸಂಘಟನಾ ಕಾರ್ಯ ದರ್ಶಿ ಯಾಗಿ ಮೊಹಮ್ಮದ್ ಕಡಂಬಾರ್ ಶಿಕ್ಷಣ ವಿಭಾಗ ಕಾರ್ಯದರ್ಶಿಯಾಗಿ ಫೈಝಲ್ ಕಣ್ಣಂಗಾರ್ ವೆಲ್ಫೇರ್ ಕಾರ್ಯ ದರ್ಶಿಯಾಗಿ ಆಸಿಫ್ ಕಣ್ಣಂಗಾರ್ ಪಬ್ಳಿಶಿಂಗ್ ವಿಭಾಗ ಕಾರ್ಯದರ್ಶಿಯಾಗಿ ಅಷ್ಫಾಕ್ ಅಡ್ಮಿನ್ ವಿಭಾಗ ಕಾರ್ಯದರ್ಶಿಯಾಗಿ ಬಶೀರ್ ಮಣಿಪುರ ಇಹ್ಸಾನ್ ಕಾರ್ಯದರ್ಶಿಯಾಗಿ ಇಬ್ರಾಹಿಂ ಬನಾರಿ ರವರನ್ನು ಆರಿಸಲಾಯಿತು. ಸದಸ್ಯರಾಗಿ ಇಬ್ರಾಹಿಂ ಅಡ್ಡೂರ್, ಆರಿಸ್ ವಿಟ್ಲ, ಯಾಕೂಬ್ ಪಾವೂರ್, ಶಂಶು ಕಣ್ಣಂಗಾರ್, ನೊಮಾನ್ ಹುಬ್ಬಳ್ಳಿ ಇವರುಗಳನ್ನು ಆಯ್ಕೆ ಮಾಡಲಾಯಿತು
ಈ ಸಭೆ ಯಲ್ಲಿ ಸೆಕ್ಟರ್ ಕಾರ್ಯಕರ್ತರು ಮತ್ತು ಝೋನ್ ನೇತಾರರು ಭಾಗವಹಿಸಿದ್ದರು. ಕೊನೆಯಲ್ಲಿ ಇಂದು ಮರಣ ಹೊಂದಿದ ಪಾಣಕ್ಕಾಡ್ ತಂಙಳ್ ರವರಿಗೆ ಪ್ರಾರ್ಥಿಸಿ ನೂತನ ಕಾರ್ಯದರ್ಶಿ ಕಬೀರ್ ಉಳ್ಳಾಲ ರವರು ಧನ್ಯವಾದ ಅರ್ಪಿಸಿ ಮೂರು ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.