ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್) : ಹಲವಾರು ವರ್ಷಗಳಿಂದ ಅಬುಧಾಬಿಯಲ್ಲಿ ದುಡಿಯುತಿದ್ದ ಅಬೂಬಕ್ಕರ್ (ಅಬ್ಬಕ್ಕ)ಮಂಗಿಲಪದವು ರಜೆ ನಿಮಿತ್ತ ಊರಿಗೆ ಬಂದು ಒಂದು ವಾರದಲ್ಲಿ ಅಸೌಖ್ಯದಿಂದ ಮರಣ ಹೊಂದಿದರು. ಅವರು ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ಇದರ ಸದಸ್ಯರು ಮತ್ತು ಹಲವಾರು ಸಂಘ ಸಂಸ್ಥೆಗಳ ಹಿತೈಷಿಯೂ ಸಹಾಯಿಯೂ ಆಗಿದ್ದರು.
ಅವರ ಹೆಸರಲ್ಲಿ ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ಇದರ ವತಿಯಿಂದ ಅವರ ನಿವಾಸ ಮಂಗಿಲಪದವಿನಲ್ಲಿ ಇದೇ ಬರುವ ಆದಿತ್ಯವಾರ ರಾತ್ರಿ (29-05-2022) ಇಶಾ ನಮಾಜಿನ ಬಳಿಕ ಉಲಮಾ ನೇತಾರರ ನೇತ್ರತ್ವದಲ್ಲಿ ತಹಲೀಲ್ ಮತ್ತು ದುಹಾ ಮಜಲಿಸ್ ನಡೆಯಲಿದೆ.
ವಿಟ್ಲ ಪರಿಸರದ ಎಲ್ಲಾ ಸುನ್ನೀ ಕಾರ್ಯಕರ್ತರು ಈ ಮಜಲಿಸ್ ನಲ್ಲಿ ಪಾಲ್ಗೊಳ್ಳಲು ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ಇದರ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.