ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿಯವರನ್ನು ನಿಂದಿಸಿದ್ದ ನೂಪುರ್ ಶರ್ಮಾಳನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್ ಒಬ್ಬನ ಕತ್ತು ಕತ್ತರಿಸಿದ ಘಟನೆ ಖಂಡನೀಯ ಮತ್ತು ಅಮಾನವೀಯ ಕೃತ್ಯ.ಆರೋಪಿಗಳನ್ನು ಶೀಘ್ರವೇ ಬಂಧಿಸಿ ವಿಚಾರಣೆ ಕೈಗೊಂಡು ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು.
ಈ ಕೊಲೆಗಡುಕರು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರಿಗೂ ಕೊಲೆ ಬೆದರಿಕೆ ಹಾಕಿರುವುದು ವರದಿಯಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಯಾವ ಧರ್ಮಗ್ರಂಥಗಳಲ್ಲಿಯು ಯಾರ ಪ್ರಾಣವನ್ನು ತೆಗೆಯಲು ಯಾರಿಗೂ ಅನುಮತಿ ನೀಡಿಲ್ಲ ಎಂಬುದನ್ನು ಅರಿಯಬೇಕು. ಖುದ್ದು ಪೈಗಂಬರರೇ ಹೇಳಿದ್ದಾರೆ ”ಒಬ್ಬ ಮನುಷ್ಯನನ್ನು ಕೊಲೆಗೈದರೆ ಇಡೀ ಮನುಷ್ಯಕುಲವನ್ನೇ ಕೊಲೆಗೈದಂತೆ” ಎಂದು. ಕೋಮು ರಾಜಕಾರಣ ಅತ್ಯಂತ ಅಪಾಯಕಾರಿ,ಕೋಮು ರಾಜಕಾರಣ ದೇಶವನ್ನು ಅವನತಿಯ ತುತ್ತ ತುದಿಗೆ ಕೊಡೂಯ್ಯುತ್ತದೆ.ಇಂದು ನಾವೆಲ್ಲಾ ಪ್ರಜ್ಞಾವಂತರು,ಸರ್ವಜನಾಂಗದ ಶಾಂತಿಯ ತೋಟವಾದ ಭಾರತೀಯ ಒಕ್ಕೂಟವನ್ನು ಪ್ರೀತಿಸುವವರಾಗಿ ಈ ಕೃತ್ಯವನ್ನು ಹಾಗೆಯೇ ಯಾವುದೇ ಕೋಮು ಹಿಂಸೆಯ ಕೃತ್ಯವನ್ನು ಖಂಡಿಸದೆ ಇದ್ದರೆ ಅದು ಮಾಹಾತ್ಮ ಬಾಪುವಿನ ನೆಲದಲ್ಲಿ ಹುಟ್ಟಿದ ನಮಗೆ ನಾವೇ ಮಾಡಿಕೊಳ್ಳುವ ದ್ರೋಹ.
ದೇಶದ ಜನರ ನಡುವೆ ಧರ್ಮ ರಾಜಕಾರಣವನ್ನುಂಟು ಮಾಡಿ,ಕಲಹಗಳನ್ನು ಮಾಡಿಸುವವರ ಬಗ್ಗೆ ಸರ್ಕಾರ ಕಟ್ಟೆಚ್ಚರ ವಹಿಸಬೇಕು.ಶಾಂತಿ,ಸೌಹಾರ್ದ ವಾತಾವರಣ ನಿರ್ಮಿಸಲು ಸರ್ಕಾರ ಮುಂದಾಗಲಿಲ್ಲವೆಂದರೆ ದೇಶದ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ.ಸರ್ಕಾರ ಆದಷ್ಟು ಬೇಗ ಎಚ್ಚರವಾಗಬೇಕು ಮತ್ತು ನಾಗರಿಕ ಸಮಾಜವು ಕೂಡ ಎಲ್ಲಾ ರೀತಿಯ ಧರ್ಮ ಬೇಧಗಳನ್ನು ಖಂಡಿಸಬೇಕು.
-ಸಿ.ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರು-ಜಾತ್ಯಾತೀತ ಜನತಾದಳ ಮಾಜಿ ಕೇಂದ್ರ ಸಚಿವರು-ಭಾರತ ಸರ್ಕಾರ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.