ಉಪ್ಪಿನಂಗಡಿ (www.vknews.in) : ಆತೂರು ಸಮೀಪದ ಕುದ್ಲೂರು ಎಂಬಲ್ಲಿ ಮುಸ್ಲಿಮ್ ಗೆಳತಿಯ ಮನೆಗೆ ತೆರಳಿದ ಹಿಂದೂ ಯುವತಿಯನ್ನು ಬೆನ್ನಟ್ಟಿಕೊಂಡು ಹೋಗಿ ಪೋಲಿಸರಿಗೆ ಸುಳ್ಳು ಮಾಹಿತಿ ನೀಡಿ ಮುಸ್ಲಿಂ ಯುವತಿಯ ಮನೆಯಲ್ಲಿ ದಾಂಧಲೆ ನಡೆಸಲು ಯತ್ನಿಸಿದ ಸಂಘ ಪರಿವಾರದ ಪುಡಾರಿ ಕಾರ್ಯಕರ್ತರ ನಡೆಯನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಪ್ಪಿನಂಗಡಿ ವಲಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಪೋಲಿಸರು ಯುವತಿಯರ ಬೆಂಬಲಕ್ಕೆ ನಿಂತು ಅನಗತ್ಯವಾಗಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬೇಕಿತ್ತು. ಆದರೆ ಪೋಲಿಸರು ಒತ್ತಡಕ್ಕೆ ಮಣಿದು ಘಟನೆ ನಡೆದು ಒಂದು ವಾರ ಕಳೆದರು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸದೆ ಸಂತ್ರಸ್ತೆ ಯುವತಿಯರಿಗೆ ನ್ಯಾಯ ನಿರಾಕರಣೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಯುವತಿಯ ಮನೆಗೆ ಆಗಮಿಸಿದ್ದ ಪೋಲಿಸರು ಬೆಂಗಳೂರಿನಲ್ಲಿ ಕೆಲಸಕ್ಕಿರುವ ಮುಸ್ಲಿಂ ಯುವತಿಯ ಸಹೋದರನನ್ನು ವಿಚಾರಿಸಿದ ರೀತಿ ನೋಡಿದರೆ ಒಂದು ವೇಳೆ ಈ ಘಟನೆ ನಡೆದ ಸಂದರ್ಭದಲ್ಲಿ ಆ ಯುವತಿಯ ಸಹೋದರ ಮನೆಯಲ್ಲಿ ಇರುತ್ತಿದ್ದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸೃಷ್ಟಿಸುತ್ತಿದ್ದ ಕಟ್ಟುಕಥೆಗಳು ಅದೇ ರೀತಿ ವಾಸ್ತವ ಎಂಬಂತೆ ಬಿಂಬಿಸಿ ಪೋಲಿಸರು ಸಂತ್ರಸ್ತರ ವಿರುದ್ಧವೇ ಕೇಸ್ ದಾಖಲಿಸಲು ಮಾಡುತ್ತಿದ್ದ ಉತ್ಸುಕತೆಯು ಸದ್ಯದ ಘಟನಾವಳಿಗಳನ್ನು ಕಾಣುವಾಗ ಮನಗಾಣುತ್ತದೆ.
ಉನ್ನತ ಪೋಲಿಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮದಡಿಯಲ್ಲಿ ಬಂಧಿಸಬೇಕು ಹಾಗೂ ಘಟನೆ ನಡೆದು ಒಂದು ವಾರ ಕಳೆದರು ಪ್ರಕರಣ ದಾಖಲಿಸಲು ಮೀನಮೇಷ ಎಣಿಸಿದ ಪೋಲಿಸರ ವಿರುದ್ಧವೂ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನ್ಯಾಷನಲ್ ವಿಮೆನ್ಸ್ ಫ್ರಂಟ್(NWF) ಉಪ್ಪಿನಂಗಡಿ ವಲಯಾಧ್ಯಕ್ಷೆ ಸಾಜಿದ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.