ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ದುಲ್ಪುಖಾರ್ ಸೇವಾ ಟ್ರಸ್ಟ್ ಕನ್ಯಾನ ಇದರ ಮಾಜಿ ಅಧ್ಯಕ್ಷರೂ ಜನಾನುರಾಗಿಯೂ ಆದ ಅಬ್ದುಲ್ ಖಾದರ್ ಚೆಡವು ಯಾನೆ ಪ್ರೂಟ್ ಅದ್ದುಚ್ಚ ಹೃದಯಾಘಾತದಿಂದ ಶನಿವಾರ ಸಾಯಂಕಾಲ ನಿಧನರಾದರು.
ಸದಾ ನಗುಮುಖದಿಂದಿರುತ್ತಿದ್ದ ಎಲ್ಲರೊಡನೆ ಪ್ರೀತಿ, ಮಮತೆಯಿಂದ ಬೆರೆಯುತ್ತಿದ್ದ ವಿಶೇಷವಾಗಿ ಆಲಿಂಗಳನ್ನು ಗೌರವಿಸುತ್ತಿದ್ದ, ಅವರ ನಿಧನ ವಾರ್ತೆ ಕೇಳಿ ಊರಿಗೆ ಊರೇ ರೋದಿಸಿದ್ದು ಅವರ ಜನಮಣ್ಣನೆಗೆ ಹಿಡಿದ ಕೈಗನ್ನಡಿಯಾಗಿತ್ತು.
ಮರಣ ಹೊಂದುವಾಗ ಕನ್ಯಾನ ತಾಜುಲ್ ಉಲಮಾ ಟೌನ್ ಮಸೀದಿಯ ಅಧ್ಯಕ್ಷರಾಗಿಯೂ ದುಲ್ಪುಖಾರ್ ಸೇವಾ ಟ್ರಸ್ಟ್ ಸಲಹೆಗಾರರಾಗಿಯೂ ಹಲವು ಸಂಘ ಸಂಸ್ಥೆಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು
ಅವರ ನಿಧನವು ದುಲ್ಪುಖಾರ್ ಸಂಘಟನೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಮತ್ತು ಅವರ ನಿದನಕ್ಕೆ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸುವುದಾಗಿ ದುಲ್ಪುಖಾರ್ ಸೇವಾ ಟ್ರಸ್ಟ್ ಹಾಗೂ ದುಲ್ ಪುಖಾರ್ ಗಲ್ಫ್ ಕಮಿಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.