ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ಪತ್ನಿಯನ್ನು ಕೊಂದು ಜಲಪಾತಕ್ಕೆ ಎಸೆದಿದ್ದ ಯುವಕನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಹನಿಮೂನ್ ಟ್ರಿಪ್ ವೇಳೆ ಪತಿ ಪತ್ನಿ ವಾಗ್ವಾದಕ್ಕಿಳಿದು ಆಂಧ್ರಪ್ರದೇಶದಲ್ಲಿ ಪತ್ನಿಯನ್ನು ಚೂರಿಯಿಂದ ಇರಿದು ಜಲಪಾತಕ್ಕೆ ಎಸೆದ ಪ್ರಕರಣದಲ್ಲಿ ಚೆನ್ನೈ ಮೂಲದ ಮದನ್ ಎಂಬಾತನನ್ನು ಬಂಧಿಸಲಾಗಿದೆ. ಈ ಜೋಡಿಯು ವರ್ಷಗಳ ಹಿಂದೆ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು.
ಚೆನ್ನೈ ಮೂಲದ ಸೆಲ್ವಿ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಸೆಲ್ವಿ ಮತ್ತು ಅವರ ಪತಿ ಮದನ್ ರೆಡ್ ಹಿಲ್ಸ್ ಬಳಿಯ ಸೆಂಕುಂದ್ರದಲ್ಲಿ ವಾಸಿಸುತ್ತಿದ್ದರು. ಮಗಳಿಗೆ ಕರೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೆಲ್ವಿ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ನಾಪತ್ತೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ನಂತರ ಚೆನ್ನೈ ಪೊಲೀಸರು ಆಂಧ್ರಪ್ರದೇಶ ಪೊಲೀಸರ ಸಹಾಯ ಕೋರಿದ್ದಾರೆ. ಮದನ್ ಮತ್ತು ಸೆಲ್ವಿ ಕೊನಿಯಾ ಪ್ಯಾಲೇಸ್ಗೆ ಬೈಕ್ನಲ್ಲಿ ಬರುತ್ತಿದ್ದು, ನಂತರ ಒಬ್ಬರೇ ವಾಪಸ್ ಹೋಗುತ್ತಿದ್ದುದನ್ನು ಆಂಧ್ರ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆ ಮಾಡಿದ್ದಾರೆ. ಜಲಪಾತದಲ್ಲಿ ಶೋಧ ನಡೆಸಿದಾಗ ಕೊಳೆತ ಶವ ಪತ್ತೆಯಾಗಿದೆ. ಸೆಂಕುಂಡ್ರಂ ಪೊಲೀಸರು ಮದನನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಆಂಧ್ರಪ್ರದೇಶದ ಕೊನಿಯಾ ಪ್ಯಾಲೇಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಪತ್ನಿ ನನಗೆ ಮೋಸ ಮಾಡಿದ್ದಾಳೆ ಎಂದು ಮದನ್ ಹೇಳಿದ್ದಾನೆ. ಪ್ರಯಾಣದ ವೇಳೆ ಜಗಳ ನಡೆದಿದ್ದು, ಚಾಕುವಿನಿಂದ ಇರಿದು ನಂತರ ಜಲಪಾತಕ್ಕೆ ಎಸೆಯಲಾಗಿದೆ ಎಂದು ಮದನ್ ಒಪ್ಪಿಕೊಂಡಿದ್ದಾರೆ. ಕೊಲೆ ಆಂಧ್ರದಲ್ಲಿ ನಡೆದಿರುವುದರಿಂದ ಆರೋಪಿಯನ್ನು ಆಂಧ್ರ ಪೊಲೀಸರ ವಶಕ್ಕೆ ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.