ಗರ್ಬಿಣಿಗಳ, ಮಕ್ಕಳಿಲ್ಲದವರ ಆಶಾಕೇಂದ್ರ, ಲಕ್ಷ ದ್ವೀಪಿನ ಆತ್ಮೀಯ ಚೈತನ್ಯ ಸಯ್ಯದ್ ಮಹಮ್ಮದ್ ಖಾಸಿಮ್ ವಲಿಯುಲ್ಲಾಹಿಯ ಕುರಿತು ಒಂದಿಷ್ಟು..
ಇವರೊಬ್ಬ ಕರ್ನಾಟಕದವರು ಎಂದು ನಮಗೆಷ್ಟು ಮಂದಿಗೆ ಗೊತ್ತಿದೆ…!
(www.vknews.in) : ಸಯ್ಯದ್ ಮಹಮ್ಮದ್ ಖಾಸಿಂ ವಲಿಯುಲ್ಲಾಹಿಯವರ ಜನನ ಕರ್ನಾಟಕದ ಅಂಕೊಲದಲ್ಲಾಗಿದೆ. ಶೈಖ್ ಮುಹಿಯದ್ದೀನ್ ಜೀಲಾನಿಯವರ ಕುಟುಂಬ ಪರಂಪರೆಯಲ್ಲಾಗಿದೆ ಜನನ. ಚಿಕ್ಕ ಪ್ರಾಯದಲ್ಲಿ ಮಕ್ಕಾ ಯಾತ್ರೆ ಕೈಗೊಂಡು, ಅಲ್ಲಿ ಬೇಕಾದ ಎಲ್ಲಾ ವಿದ್ಯಾರ್ಜನೆಗಳನ್ನು ಕರಗತ ಮಾಡಿ ಜಿದ್ದಾ ಮೂಲಕ ಹಡಗಿನಲ್ಲಿ ಕೇರಳದ ಕಣ್ಣೂರಿಗೆ ತಲುಪಿದರು. ಹಡಗು ಯಾತ್ರಾ ಮಧ್ಯೆ ಹಲವಾರು ಅದ್ಭುತ ಪವಾಡಗಳು ಅವರಿಂದ ಉಂಟಾದವು.
ಅರಕ್ಕಲ್ ರಾಜವಂಶದವರು ರಾಜ್ಯವನ್ನಾಳುತ್ತಿರುವ ಸಂದರ್ಭವದು. ಲಕ್ಷದ್ವೀಪ್ ಕೂಡಾ ಅರಕ್ಕಲ್ ರಾಜರ ಅದೀನದಲ್ಲಿತ್ತು. ಲಕ್ಷದ್ವೀಪದವರ ಆತ್ಮೀಯ ಔನತ್ಯಕ್ಕೆ ಅರಕ್ಕಲ್ ರಾಜರ ನಿರ್ದೇಶ ಮತ್ತು ಲಕ್ಷದ್ವೀಪದವರ ಆಹ್ವಾನದ ಮೇರೆಗೆ ಖಾಸಿಮ್ ವಲಿಯುಲ್ಲಾಹಿಯವರು ಲಕ್ಷದ್ವೀಪಕ್ಕೆ ಬಂದು ತನ್ನ ಪ್ರಬೋಧನೆಯನ್ನು ಪ್ರಾರಂಭಿಸಿದರು. ಎಲ್ಲಾ ದ್ವೀಪಗಳನ್ನು ಸುತ್ತಿ ಅಲ್ಲೆಲ್ಲಾ ದೀನೀ ಕೇಂದ್ರಗಳನ್ನು ಸ್ಥಾಪಿಸಿ ಲಕ್ಷದ್ವೀಪಿನ ನೈತಿಕ ಪ್ರಗತಿಗೆ ಕಾರಣಕರ್ತರಾಗಿ ಸುದೀರ್ಘ ನೂರೊಂದು ವರ್ಷ ಆಯುಷ್ಕಾಲದಲ್ಲಿ ಬಹುತೇಕ ಬಾಗವನ್ನು ಅಲ್ಲೇ ವ್ಯಯಿಸಿ ದ್ವೀಪ್ ಸಮೂಹದ ಸುಲ್ತಾನರಾಗಿ ಕವರತ್ತಿ ದ್ವೀಪದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿದ್ದಾರೆ.
ಮಹಿಳೆಯರಿಗೆ ಹೆರಿಗೆ ನೋವಿಲ್ಲದ ಊರು, ಸಿಸೇರಿಯನ್ ಹೆರಿಗೆ ಕೂಡಾ ಇಲ್ಲಿಲ್ಲ..
ಖಾಸಿಮ್ ವಲಿಯವರು ಒಂದು ದಿನ ತನ್ನ ಶಿಷ್ಯಂದಿರೊಂದಿಗೆ ನಡೆದು ಕೊಂಡು ಹೋಗುತ್ತಿದ್ದಾಗ ಒಂದು ಮನೆಯಿಂದ ಮಹಿಳೆಯ ಅಸಹ್ಯ ನೋವಿನ ಅರ್ತನಾದ ಕೇಳಿಸಿತು. ಅದೇನೆಂದು ಕೇಳಿದಾಗ, ಮಹಿಳೆಯೊಬ್ಬಳ ಹೆರಿಗೆ ನೋವಿನಿಂದ ಬೊಬ್ಬಿಡುತ್ತಿದ್ದಾಳೆ ಎಂದರು. ಕೂಡಲೆ ಕಾಸಿಮ್ ವಲಿಯುಲ್ಲಾಹಿಯರು ಪಾತ್ರವೊಂದನ್ನು ತರಿಸಿ ಅದರಲ್ಲಿ ಬರೆದು ಆ ಪಾತ್ರದ ನೀರನ್ನು ನೀಡಿದರು.
ಮಾತ್ರವಲ್ಲ ಕೂಡಲೇ ಅಲ್ಲಾಹನಲ್ಲಿ ಪ್ರಾರ್ಥನೆ ಕೂಡಾ ನಡೆಸಿದರು. ನನ್ನ ಈ ಊರಿನಲ್ಲಿ ನೀನು ಈ ರೀತಿಯ ನೋವನ್ನು ನೀಡಬಾರದು. ಆ ಬಳಿಕ ಆ ಪ್ರದೇಶದಲ್ಲಿ ಮಹಿಳೆಯರಿಗೆ ಹೆರಿಗೆ ನೋವು ಅನುಭವಪಡುವುದಿಲ್ಲ. ಸಿಸೇರಿಯನ್ ಹೆರಿಗೆ ಕೂಡಾ ಆ ಊರಿನಲ್ಲಿ ಇಲ್ಲ. ಇಂದು ಕೂಡಾ ಆ ಪಾತ್ರ ಅಲ್ಲಿದೆ. ಆ ಪಾತ್ರದ ನೀರನ್ನು ಲಕ್ಷದೀಪಿಗೆ ಹೋಗಿ ಬರುವವರು ತರುತ್ತಿದ್ದಾರೆ. ಅದು ಗರ್ಭಿಣಿಗಳಿಗೆ ಸಿದ್ದೌಷದ ವಾಗಿದೆ.
ಕಾಗೆ ಇಲ್ಲದ ಊರು
ಖಾಸಿಂ ವಲಿಯವರು ಒಂದು ದಿನ ನಮಾಝ್ ಗೆ ಸಿದ್ದವಾಗುತ್ತಿದ್ದಂತೆ ಅವರ ಶಿರವಸ್ತ್ರಕ್ಕೆ ಕಾಗೆಯೊಂದು ಬಂದು ಮಲ ವಿಸರ್ಜನೆ ಮಾಡಿತು. ತನ್ನ ಇಬಾದತ್ ಗೆ ತೊಡಕನ್ನುಂಟು ಮಾಡಿದ ಕಾಗೆಯಿಂದ ಬೇಸತ್ತ ಖಾಸಿಂ ವಲಿಯವರು ಹೇಳಿಯೇ ಬಿಟ್ಟರು “ಇನ್ನು ಮುಂದಕ್ಕೆ ಈ ಊರಿನಲ್ಲಿ ಕಾಗೆಗಳೇ ಬೇಡ” ಅಂದಿನಿಂದ ಇಂದಿನ ವರೆಗೂ ಕವರತ್ತಿ ದ್ವೀಪದಲ್ಲಿ ಕಾಗೆಗಳೇ ಇಲ್ಲ..
ಜೀವನದುದ್ದಕ್ಕೂ ಹಲವಾರು ಕರಾಮತ್ ನೊಂದಿಗೆ, ತಖ್ವಾದಿಷ್ಠಿತ ಬದುಕನ್ನೇ ಬೊಧಿಸಿದ ಖಾಸಿಂ ವಲಿಯವರ ಮಕ್ಕಳೊಬ್ಬರಾಗಿದ್ದಾರೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಯುಸುಪ್ ವಲಿಯುಲ್ಲಾಹಿ. ಮತ್ತೊಬ್ಬ ಮಗನಾಗಿದ್ದಾರೆ ಕಾಸರಗೋಡು ಜಿಲ್ಲೆಯ ಮಚ್ಚಂಪಾಡಿ ಯಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ.
ಮೊಹರ್ರಂ ತಿಂಗಳು ಸಯ್ಯದ್ ಮೊಹಮ್ಮದ್ ಖಾಸಿಂ ವಲಿಯವರ ಅನುಸ್ಮರಣಾ ತಿಂಗಳಾಗಿದೆ. ಅಲ್ಲಾಹು ಅವರ ಬರ್ಕತಿನಿಂದ ನಮ್ಮ ಇಹಪರ ವಿಜಯಿಗಳಲ್ಲಿ ಸೇರಿಸಲಿ… ಆಮೀನ್
✍️ ಇಮ್ರಾನ್, ರೆಂಜಲಾಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.