ಮಂಜೇಶ್ವರ (www.vknews.in) : ಇಲ್ಲಿನ ಹೊಸಂಗಡಿಯ ಅಯ್ಯಪ್ಪ ಮಂದಿರದಿಂದ ಪಂಚಲೋಹ ವಿಗ್ರಹ ಹಾಗೂ ಭಂಢಾರವನ್ನು ಕಳವುಗೈದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ಧಾರೆ. ಮಜಿಬೈಲು ಬೆಜ್ಜ ನಿವಾಸಿ ಲಕ್ಷ್ಮೀಶ ಭಂಡಾರಿ ಬಂಧಿತ ಆರೋಪಿ. ಕೃಷ್ಣ ಜನ್ಮಾಷ್ಟಮಿ ರಾತ್ರಿ ಈತ ಹೊಸಂಗಡಿಯ ಅಯ್ಯಪ್ನ ಮಂದಿರದ ಆರಾಧ್ಯಮೂರ್ತಿಯನ್ನು ಕಳವುಗೈದಿದ್ಜು, ಅದನ್ನು ಕದ್ದು ಬೈಕಿನಲ್ಲಿ ಹೊತ್ತೊಯ್ಯಲಾಗದೇ ಮಂದಿರದ ಸಮೀಪದ ಪೊದೆಗಳೆಡೆಯಲ್ಲಿ ಉಪೇಕ್ಷಿಸಿ ಪರಾರಿಯಾಗಿದ್ದನು. ಸಿಸಿ ಕ್ಯಾಮೆರ ಹಾಗೂ ಬೆರಳಚ್ಚಿನ ಜಾಡು ಹಿಡಿದು ಮಂಜೇಶ್ವರ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ದೇವಸ್ಥಾನ ಕಳವುಗೈಯ್ಯುವುದೇ ಈತನ ಕಸುಬು ; ದ.ಕ, ಕಾಸರಗೋಡು ಸಹಿತ ಹಲವೆಡೆಗಳಲ್ಲಿ ಕಳವು ಪ್ರಕರಣಗಳಲ್ಲಿ ಕುಖ್ಯಾತಿ ಪಡೆದ ಈತ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯುವುದರಲ್ಲಿ ಚಾಣಾಕ್ಷ. ಅಯ್ಯಪ್ಪ ಮಂದಿರದ ವಿಗ್ರಹ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಮಂಜೇಶ್ವರ ಪೊಲೀಸರು ಯಶಸ್ವಿಯಾಗಿದ್ಜಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.