ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳು ನಗರದ ಎಲ್.ಐ.ಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವಿಮಾ ನಿಗಮ ಹಾಗೂ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದ ಜೀವ ವಿಮಾ ನಿಗಮದ ಒಕ್ಕೂಟದ ಪ್ರತಿನಿಧಿಗಳು ಕೂಡಲೇ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಎಲ್.ಐ.ಸಿ ಬೆಂಗಳೂರು ವಿಭಾಗೀಯ 2ರ ಲಿಯಾಫಿ ಅಧ್ಯಕ್ಷ ವಿ.ರವೀಂದ್ರನಾಥ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಜೀವ ವಿಮಾ ನಿಗಮದ ಪ್ರತಿನಿಧಿಗಳು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ವಿಮಾ ನಿಗಮಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಇದುವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ಪಾಲಿಸಿದಾರರಿಂದ ಎಲ್.ಐ.ಸಿ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಸಂಸ್ಥೆ ಪ್ರತಿನಿಧಿಗಳಿಗೆ ಹಾಗೂ ಪಾಲಸಿದಾರರಿಗೆ ಬೋನಸ್ ಹೆಚ್ಚಳ ಮಾಡಿದರೆ ಸಂಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಈ ವಿಚಾರವನ್ನು ಹಲವು ಬಾರಿ ಸಂಸ್ಥೆಗೆ ಮನವಿ ಮಾಡಿದರೂ ಇದುವರೆಗೂ ಪರಿಗಣಿಸಿಲ್ಲ ಎಂದು ದೂರಿದರು.
ಬೇಡಿಕೆಗಳೇನು: ಪಾಲಿಸಿದರರಿಗೆ ಬೋನಸ್ ಹೆಚ್ಚಿಸುವುದು, ಪಾಲಸಿದಾರರ ಸಾಲಕ್ಕೆ ಬಡ್ಡಿ ಕಡಿಮೆ ಮಾಡುವುದು, ಜಿಎಸ್ಟಿಯನ್ನು ವಿಮೆಗೆ ತೆಗೆದು ಹಾಕುವುದು, ಪ್ರತಿನಿಧಿಗಳ ಕಮಿಷನ್ ಅನ್ನು 2013 ರ ಐಆರ್ಡಿಎ ಸೂಚನೆ ಮೇರೆಗೆ ಹೆಚ್ಚು ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಲ್.ಐ.ಸಿ ಪ್ರತಿನಿಧಿಗಳ ಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ಅಧ್ಯಕ್ಷ ಬಿ.ಬಯ್ಯಾರೆಡ್ಡಿ, ಇಸಿ ಸದಸ್ಯ ಟಿ.ಸಿ.ಲಕ್ಷ್ಮಣ್, ಉಪಾಧ್ಯಕ್ಷ ವೆಂಕಟಶಿವಾರೆಡ್ಡಿ, ಮಾಜಿ ಅಧ್ಯಕ್ಷ ಎಂ.ಸೋಮಶೇಖರ್, ಪ್ರತಿನಿಧಿಗಳಾದ ವೆಂಕಟೇಶ್ ಪ್ರಸಾದ್, ಶ್ರೀನಿವಾಸಚಾರಿ, ಕೆ.ಎಲ್.ವೆಂಕಟೇಶ್, ಗೌರಿಬಿದನೂರು ಶಶಿಧರ್, ಮಂಜುನಾಥ್, ರವಿಚಂದ್ರರೆಡ್ಡಿ, ರಮೇಶ್ ಗುಪ್ತಾ, ಮೋಹನ್ ಬಾಬು, ಗುರುರಾಜ್, ಕೆ.ಎನ್.ಶ್ರೀಕಾಂತ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.
ವರದಿ: ತೇ.ಮೀಂ.ಅನ್ಸಾರಿ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.