ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಅನಾರೋಗ್ಯ ಪೀಡಿತ ವ್ಯಕ್ತಿ ಪಡುವ ಪಾಡು ಅನುಭವಿಸುವ ನೋವು,ಆತನ ಯಾತನೆ, ವೇದನೆ ಯನ್ನು ಆಸ್ಪತ್ರೆಗೆ ಭೇಟಿ ನೀಡಿ ಕಣ್ಣಾರೆ ಕಾಣುವುದಾದರೆ ಆರೋಗ್ಯ ವಂತರಿಗೆ ಚಿಂತಿಸಲು ಸೂಕ್ತ ವಾದ ಸಮಯ ಎಂದು ಮುಸ್ತಫ ಸಅದಿ ಅಭಿಪ್ರಾಯ ಪಟ್ಟರು.
ಅವರು ಇಂದು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಡಿ. ಕೆ. ಎಸ್. ಸಿ. ಸಮನ್ವಯ ಸಮಿತಿ(ಜಿಲ್ಲಾ ಸಮಿತಿ, ಮರ್ಕಝ್ ಸಮಿತಿ, ಸುನ್ನೀ ಗೈಡೆನ್ಸ್ ಬ್ಯುರೋ ಸಮಿತಿ)ಹಾಗೂಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಇದರ ಜಂಟಿ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ 150ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂಅಕ್ಯು ಲ್ಯಾಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಫಿಸಿಯೋಥೆರಪಿ ಶಿಬಿರ ಮತ್ತುರೋಯಲ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಉಚಿತ ಪ್ರೇಮ್ ವಿತರಣೆ ಕಾರ್ಯಕ್ರಮ ವನ್ನು ಇತ್ತೀಚಿಗೆ ಡಿ. ಕೆ. ಎಸ್. ಸಿ. ಮುಳೂರ್ ಮರ್ಕಝ್ ಕ್ಯಾಂಪಸ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು D K S C ಸಮನ್ವಯ ಸಮಿತಿಯ ಉಪಾಧ್ಯಕ್ಷರಾದ ಹುಸೈನಾಜಿ ಕಿನ್ಯಾ ಮಾತಾಡಿ ರಕ್ತದಾನದಂತಹ ಮಹತ್ತರವಾದ ದಾನ ಇನ್ನೊಂದಿಲ್ಲ ಇದರ ಮಹತ್ವವನ್ನು ಅರಿತು ಮುನ್ನಡೆಯಿರಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಳೂರು ಜುಮ್ಮಾ ಮಸೀದಿಯ ಅದ್ಯಕ್ಷರಾದ ಸೈಯದ್ ಮುರಾದ್ ಆಲಿ,ಕಾಪು ಪುರಸಭಾ ಸದಸ್ಯರಾದ ಆಸಿಫ್ ಅಬ್ದುಲ್ ರಹಿಮಾನ್, ಸತೀಶ್ ಮುಳೂರು,ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್,ಅಲ್ ಇಹ್ಸಾನ್ ಮುಳೂರು ಇದರ ಪ್ರಿನ್ಸಿಪಲ್ ಕೆ.ಎಸ್.ಹಬೀಬ್ ರ್ರಹ್ಮಾನ್,ಪಡುಬಿದ್ರೆ ಡಿ.ಕೆ.ಎಸ್.ಸಿ.ಘಟಕ ಅದ್ಯಕ್ಷರಾದ ಎ.ಅಬ್ದುಲ್ ಖಾದರ್, ಡಿ.ಕೆ.ಎಸ್.ಸಿ.ಸ್ಥಾಪಕ ಸದಸ್ಯರಾದ ಉಮರ್ ಹಾಜಿ ಮುಕ್ವೆ,ಶಿಕ್ಷಣ ಸಮನ್ವಯ ಸಮಿತಿ ಮುಖ್ಯಸ್ಥ ಅನ್ವರ್ ಹುಸೇನ್,DKSC ಉಪ್ಪಿನಂಗಡಿ ಘಟಕದ ಅದ್ಯಕ್ಷರಾದ ಮಹಮ್ಮದ್ ಕುಂಞ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ.ಸಿ.ರೋಡ್, ಕಾರ್ಯದರ್ಶಿ ಬಶೀರ್ ಮಂಗಳೂರು, ಉಸ್ತುವಾರಿ ಇಂತಿಯಾಝ್ ಬಜಪೆ, ಶಿಬಿರ ಸಂಯೋಜಕ ಖಾದರ್ ಮುಂಚೂರು, ಕಾರ್ಯನಿರ್ವಾಹಕರಾದ ರಾಫಿಝ್ ಕ್ರಷ್ಣಾಪುರ, ಶಿಯಾನ್ ಪಡುಬಿದ್ರೆ, ಅಜ್ಮಲ್ ಅಸಾದಿ ಉಡುಪಿ ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಂಚಾಲಕ ರಾದ ಸಂಶುದ್ದೀನ್ ಬಲ್ಕುಂಜೆ ಸ್ವಾಗತಿಸಿದರು. ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಇದರ ಪ್ರದಾನ ಕಾರ್ಯದರ್ಶಿ Y.B.C.ಬಶೀರ್ ಆಲಿ ವಂದಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.