(www.vknews.in) ಅಕ್ರಮ ಟೋಲ್ ತೆರವು ಆಗ್ರಹಿಸಿ ಈಗಾಗಲೇ ಸಮಾನ ಮನಸ್ಕ ಸಂಘಟನೆಗಳ ಹಗಲು ರಾತ್ರಿ ಮುಷ್ಕರವನ್ನು ತೀವ್ರ ಗೊಳಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಸರ್ವ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನವಂಬರ್ 18 ರಂದು ಶುಕ್ರವಾರ ಅಪರಾಹ್ನ ಗಂಟೆ 03.00 ಕ್ಕೆ ಸುರತ್ಕಲ್ ತಡಂಬೈಲ್ ಜಂಕ್ಷನ್ ನಿಂದ ಎನ್.ಐ.ಟಿ. ಕೆ ಟೋಲ್ ಧರಣಿ ಸ್ಥಳಕ್ಕೆ , ಅಕ್ರಮ ಟೋಲ್ ತೆರವು ಆಗ್ರಹಿಸಿ, ಹಾಲಿ ಹಗಲು ರಾತ್ರಿ ಧರಣಿಗೆ ಬೆಂಬಲಿಸಿ, ಕೇಂದ್ರ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಹಠಮಾರಿ ನಿಲುವು ಮತ್ತು ಜನ ವಿರೋಧಿ ಟೋಲ್ ಸಂಗ್ರಹ ಲೂಟಿ ನೀತಿ ವಿರೋಧಿಸಿ, ಶಾಂತಿಯುತ ಪ್ರಜಾಸತ್ತಾತ್ಮಕ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಈ ಜಾಥಾಕ್ಕೆ ಸರ್ವರೂ ಭಾಗವಹಿಸಿ ಯಶಸ್ವಿ ಗೊಳಿಸಲು ಕರೆ ನೀಡಲಾಗಿದೆ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.