ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್) : ದಮ್ಮಾಮ್ ನಲ್ಲಿ ಕೇರಳದ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಕೋಯಿಕ್ಕೋಡ್ ಮೂಲದ ಮುಹಮ್ಮದ್ ಅಬ್ದುಲ್ ಬಾಸಿತ್ (26) ಮೃತ ವ್ಯಕ್ತಿ.
ಬುರೈಡಾ ಮೂಲದ ಮುಸ್ತಫಾ ಸಮೋಸಾ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಬಾಸಿತ್, ಕೆಲಸಕ್ಕಾಗಿ ದಮ್ಮಾಮ್ ಗೆ ಬಂದಿದ್ದರು. ಮೂರು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ ಬಾಸಿತ್ ಅವರನ್ನು ತೀವ್ರ ಜ್ವರದ ಕಾರಣ ದಮ್ಮಾಮ್ ವೈದ್ಯಕೀಯ ಸಂಕೀರ್ಣದ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಪರೀಕ್ಷೆಯಲ್ಲಿ ನ್ಯುಮೋನಿಯಾ ದೃಢಪಟ್ಟಿದೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಕುವೈತ್ ನಲ್ಲಿದ್ದ ಬಾಸಿತ್ ಒಂದು ವರ್ಷದ ಹಿಂದೆ ಸೌದಿ ಅರೇಬಿಯಾಕ್ಕೆ ಬಂದಿದ್ದರು. ರಿಯಾದ್ ನಲ್ಲಿರುವ ಅವರ ತಂದೆ ಬಶೀರ್ ದಮ್ಮಾಮ್ ತಲುಪಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.