ಒಡಿಶಾ (ವಿಶ್ವ ಕನ್ನಡಿಗ ನ್ಯೂಸ್) : ಅನ್ನದಲ್ಲಿ ಇರುವೆ ಕಂಡ ಕಾರಣ ಆರಂಭವಾದ ಪತಿ-ಪತ್ನಿ ನಡುವಿನ ಮಾತಿನ ಚಕಮಕಿ ಕೊಲೆಗೆ ಕಾರಣವಾಗಿದೆ. ಒಡಿಶಾದಲ್ಲಿ ಅನ್ನದಲ್ಲಿ ಇರುವೆಗಳಿವೆ ಎಂದು ಹೇಳಿದ್ದಕ್ಕೆ ಕೋಪಗೊಂಡ ಪತ್ನಿ ತನ್ನ ಪತಿಯನ್ನು ಸ್ಕಾರ್ಫ್ನಿಂದ ಕತ್ತು ಬಿಗಿದು ಕೊಂದಿದ್ದಾಳೆ. ಘಟನೆಯಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ
ಒಡಿಶಾದ ಸುಂದರ್ಗಢ್ ಜಿಲ್ಲೆಯ ರೂರ್ಕಲಾದಲ್ಲಿ ಈ ಘಟನೆ ನಡೆದಿದೆ. ಅನ್ನದಲ್ಲಿ ಇರುವೆ ಕಂಡ ಪತಿ ಪತ್ನಿಗೆ ದೂರು ನೀಡಿದ್ದಾನೆ. ಇದಾದ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಪತ್ನಿ ಸ್ಕಾರ್ಫ್ ನಿಂದ ಪತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ಘಟನೆಯಲ್ಲಿ 35 ವರ್ಷದ ಹೇಮಂತ್ ಬಾಗ್ ಮೃತಪಟ್ಟಿದ್ದಾರೆ.
ಹೇಮಂತ್ ಬಾಗ್ ತಂದೆ ಶಶಿಭೂಷಣ್ ಬಾಗ್ ಮಹಿಳೆಯ ವಿರುದ್ಧ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಹೇಮಂತ್ ಬಾಗ್ ಪತ್ನಿ ಸರಿತಾಳನ್ನು ಪೊಲೀಸರು ಬಂಧಿಸಿದ್ದರು. ಅವರಿಗೆ ಏಳು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದಾರೆ. ಚಾಲಕನಾಗಿದ್ದ ಹೇಮಂತ್ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ.
ಸೊಸೆ ಸರಿತಾ ತಮ್ಮ ಮಗ ಹೇಮಂತ್ಗೆ ಅನ್ನ ಬಡಿಸುತ್ತಿದ್ದಾಗ ಇರುವೆಗಳನ್ನು ನೋಡಿ ಹೇಮಂತ್ ವಿವರಣೆ ಕೇಳಿದ್ದಾರೆ, ಈ ಕಾರಣಕ್ಕಾಗಿ ಕೊಲೆ ನಡೆದಿದೆ ಎಂದು ಹೇಮಂತ್ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸರಿತಾ ಅವರನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.