ಇನೋಳಿ(ವಿಶ್ವಕನ್ನಡಿಗ ನ್ಯೂಸ್): ಹರೇಕಳ ಗ್ರಾಮದ ಆಲಡ್ಕ ಮರ್ಹೂಂ ಅಂಗಡಿ ಮೊಯ್ದಿನ್ ಕಟುಂಬಸ್ಥರ “ಎ.ಎಂ.ಫ್ಯಾಮಿಲಿ” ಸಮ್ಮಿಲನವು ಇನೋಳಿಯ ಲಾಲ್ ಪತ್ತರ್ ರೆಸಾರ್ಟ್ನಲ್ಲಿ ರವಿವಾರ ನಡೆಯಿತು.
ಕುಟುಂಬದ ಹಿರಿಯ ಸದಸ್ಯರಾದ ಮುಹಮ್ಮದ್ ಶರೀಫ್ ಮಲಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎ.ಎಂ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎ.ಎಂ ಕುಟುಂಬಸ್ಥರಲ್ಲಿ ಉನ್ನತ ಸಾಧನೆಗೈದ ಆರೀಫ್ ಕಲ್ಕಟ್ಟ ಸಲ್ಮಾನ್ ಫಾರಿಸ್, ಅಯಿಷತುಲ್ ಮುಫಾಝಾ ಅವರನ್ನು ಸನ್ಮಾನಿಸಲಾಯಿತು.
ಎ.ಎಂ. ಸುಲೈಮಾನ್ ಕಿನ್ಯ, ಎ.ಎಂ. ಅಬ್ದುಲ್ ಖಾದರ್ ಉರುಮನೆ, ಹೈದರ್ ದೇರಳಕಟ್ಟೆ, ಅಬ್ದುಲ್ ಅಝೀಝ್ ವಿಜಯನಗರ, ಹನೀಫ್ ಆಲಡ್ಕ, ಇಬ್ರಾಹೀಂ ಮೊಂಟೆಪದವು, ಕಲಂದರ್ ಕೂಳೂರು, ಅನೀಝ್ ಬಜಾಲ್ ಉಪಸ್ಥಿತರಿದ್ದರು.
ಮುಹಮ್ಮದ್ ಬಿಲಾಲ್ ಕಾಪು ಕಿರಾಅತ್ ಪಠಿಸಿದರು. ಮುಹಮ್ಮದ್ ಅಝ್ಮಲ್ ಮೊಂಟೆಪದವು ಸ್ವಾಗತಿಸಿದರು. ಹಮೀದ್ ಮಲಾರ್ ವಂದಿಸಿದರು. ಸಫ್ವಾನ್ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.