(www.vknews.in) : ಇತ್ತೀಚೆಗೆ ಕರ್ನಾಟಕ ರಾಜ್ಯಾದ್ಯಂತ,ರಾಜಕೀಯ ವಾಗಿ ಮತ್ತು ಆಡಳಿತಾತ್ಮಕವಾಗಿ ಸಂಚಲನವನ್ನೇ ಸೃಷ್ಟಿಸಿದ ಮತ್ತು ಇಡೀ ರಾಜ್ಯದಲ್ಲಿಯೇ ಕಾನೂನು ಸುವ್ಯವಸ್ಥೆಯ ವ್ಯತ್ಯಯ,ಮತೀಯ ದ್ರುವೀಕರಣ,, ನಿರ್ಧಿಷ್ಟ ರಾಜಕೀಯ ಪಕ್ಷದ ನಾಯಕರ ಬಂಧನ ಗಳಿಗೆ ಕಾರಣವಾದ ಸುಳ್ಯದ ಪ್ರವೀಣ್ ನೆಟ್ಟಾರು ವಿನ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದ ಮಹತ್ವದ ಸುಳಿವು ಎಂಬ ರೀತಿಯ ದ್ವನಿ ಸುರುಳಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹಂಚಿ ಹೋಗುತ್ತಿದ್ದು, ಸದ್ರಿ ದ್ವನಿ ಸುರುಳಿ ಯಲ್ಲಿನ ಮಾಹಿತಿ ಪ್ರಕಾರ ಪ್ರವೀಣ್ ನೆಟ್ಟಾರು ವಿನ ಹತ್ಯೆಯ ರೂವಾರಿಗಳು ಜಿಲ್ಲೆಯ ಪ್ರಮುಖ ರಾಜಕೀಯ ಪ್ರತಿನಿಧಿಗಳು ಎಂದು ನಂಬುವ ರೀತಿಯಲ್ಲಿದೆ.
ಸದ್ರಿ ಘಟನೆಯಿಂದಾಗಿ ಅಂದು ಜಿಲ್ಲೆ ಮತ್ತು ರಾಜ್ಯಕ್ಕೆ ಪರೋಕ್ಷವಾಗಿ ಆದ ನಷ್ಟ ಸಾದಾರಣದ್ದಲ್ಲ. ಈ ಹತ್ಯೆಗೆ ಪ್ರತಿಯಾಗಿ ಭಿನ್ನ ಧರ್ಮದ ಯುವಕನೋರ್ವ ನನ್ನು ಹತ್ಯೆ ಮಾಡಲಾಗಿದೆ. ಪರಿಹಾರ ಹಂಚುವುದರಿಂದ ಹಿಡಿದು ಹೇಳಿಕೆ ನೀಡುವ ಹಂತದವರೆಗೂ ಸರಕಾರ ಧಾರ್ಮಿಕ ತಾರತಮ್ಯ ಪ್ರದರ್ಶಿಸಿದೆ. ಒಂದೊಮ್ಮೆ ಈ ಘಟನೆ ಸರಕಾರಿ ಪ್ರಾಯೋಜಿತ ಕೃತ್ಯ ಆಗಿರುವ ದೃಡವಾದ ಸಂಶಯವೂ ಎದ್ದು ಕಾಣುತ್ತಿದೆ. ಆದುದರಿಂದ ಪ್ರಸ್ತುತ ವ್ಯಾಪಕ ವೈರಲ್ ಆಗುತ್ತಿರುವ ದ್ವನಿ ಸಂದೇಶದ ಸತ್ಯಾ ಸತ್ಯತೆಯನ್ನು ಉನ್ನತಮಟ್ಟದ ಪೊಲೀಸು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಇಂತಹ ಗೊಂದಲಕಾರಿ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ಸೃಷ್ಟಿಯಾಗಿದೆ. ಪೊಲೀಸು ಇಲಾಖೆ ತಮ್ಮ ಕರ್ತವ್ಯದ ಪ್ರಾಮುಖ್ಯತೆಯನ್ನು ಆರಿತು ದ್ವನಿ ಸಂದೇಶದ ಹಿಂದಿನ ವಾಸ್ತವ ಸತ್ಯವನ್ನು ಉನ್ನತ ಮಟ್ಟದ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.