ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಮೂವತ್ತನೇ ವರ್ಷಾಚರಣೆಯ ಘೋಷಣಾ ಸಮಾವೇಶವು ಡಿಸೆಂಬರ್ 24 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು ಇದರ ನಿರ್ವಹಣೆಗಾಗಿ “SჄS ಜುಬಿಲೀ ಗಾರ್ಡ್” ತಂಡಕ್ಕೆ ರೂಪುಕೊಡಲಾಯಿತು.
ಅಧ್ಯಕ್ಷರಾಗಿ ಯುವ ಉದ್ಯಮಿ ಸಲೀಂ ಅಡ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಸಅದಿ ಖತರ್ ಹಾಗೂ ಕೋಶಾಧಿಕಾರಿಯಾಗಿ ಮೊಯ್ದೀನ್ ಅಲ್ ಸಫರ್ ಮುಕ್ಕ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಸಯ್ಯಿದ್ ಇಸ್ಹಾಖ್ ತಂಙಳ್ ಕಣ್ಣೂರು, ಅಬ್ದುರಹ್ಮಾನ್ ಸಅದಿ ಕಂಕನಾಡಿ,ಉಮರ್ ನ್ಯೂ ಪಡ್ಪು,
ಕಾರ್ಯದರ್ಶಿಗಳಾಗಿ ನವಾಝ್ ಸಖಾಫಿ ಅಡ್ಯಾರ್,ಅಬ್ದುರಹ್ಮಾನ್ ಹಾಜಿ ಪ್ರಿಂಟೆಕ್, ಅಝೀಝ್ ಬಿಕರ್ನಕಟ್ಟೆ
ಕಾರ್ಯಕಾರಿ ಸದಸ್ಯರಾಗಿ ಹಾಫಿಲ್ ಯಾಕೂಬ್ ಸಅದಿ ನಾವೂರು, ಅಬ್ದುಲ್ಲತೀಫ್ ಮದನಿ ಕಲ್ಲಡ್ಕ, ಕೆಸಿ. ಸುಲೈಮಾನ್ ಮುಸ್ಲಿಯಾರ್ ಎಣ್ಮೂರ್,ಹಸನ್ ಪಾಂಡೇಶ್ವರ, ಮನ್ಸೂರ್ ಸಅದಿ ಮಾರ್ಕೆಟ್, ರಿಯಾಝ್ ಸಅದಿ ಗುರುಪುರ,ಯಹ್ಯಾ ಮದನಿ, ರಫೀಖ್ ಮದನಿ,ಅಬ್ಬಾಸ್ ಬಿಜೈ, ಇಬ್ರಾಹಿಂ ಮಾದರಿ ಪಂಪ್ವೆಲ್, ಅಬ್ದುಲ್ ಜಬ್ಬಾರ್ ಕಣ್ಣೂರು, ಬದ್ರುದ್ದೀನ್ ಅಡ್ಯಾರ್ ಪದವು, ನಝೀರ್ ವಳವೂರು, ಅಬ್ದುಲ್ ಹಮೀದ್ ತಲಪಾಡಿ, ಇಬ್ರಾಹಿಂ ಅಲ್ ರಹ್ಬಾ, ಅಬ್ದುಲ್ ಹಮೀದ್ ಬೆಂಗರೆ, ಹನೀಫ್ ಮುಸ್ಲಿಯಾರ್ ವಿಟ್ಲ, ಇಖ್ಬಾಲ್ ಅಹ್ಸನಿ ಬಜಾಲ್, ಶಿಹಾಬ್ ಕಣ್ಣೂರು, ಸಿರಾಜ್ ಮರ್ಕಝ್,ಹನೀಫ್ ಬಿಕರ್ನಕಟ್ಟೆ ಇವರನ್ನು ಆರಿಸಲಾಯಿತು.
ಮಂಗಳೂರು, ಬೆಂದೂರುವೆಲ್ ಜಂಕ್ಷನ್ನಲ್ಲಿರುವ ಸುಮನ್ ರೆಸಿಡೆನ್ಸಿ ಸಭಾಂಗಣದಲ್ಲಿ ಸೇರಿದ ಸಮಾವೇಶದಲ್ಲಿ ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅಧ್ಯಕ್ಷತೆ ವಹಿಸಿದರು.
ಅಬ್ದುರಹ್ಮಾನ್ ಸಅದಿ ಕಂಕನಾಡಿ ಉದ್ಘಾಟಿಸಿದರು. ಪರ್ಲ್ ಬೋಡಿ ವರ್ಕಿಂಗ್ ಕನ್ವೀನರ್ ಅಶ್ರಫ್ ಸಅದಿ ಮಲ್ಲೂರು ವಿಷಯ ಮಂಡಿಸಿದರು. ಎಸ್.ವೈ.ಎಸ್.ರಾಜ್ಯ ಕಾರ್ಯದರ್ಶಿ ಹನೀಫ್ ಹಾಜಿ ಉಳ್ಳಾಲ್, ಕೆಸಿಎಫ್ ಅಂತಾರಾಷ್ಟ್ರೀಯ ನಾಯಕ ರಹೀಂ ಸಅದಿ ಮಂಗಳೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಹಸನ್ ಪಾಂಡೇಶ್ವರ ಶುಭ ಹಾರೈಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಮಾಲಿಕಿ ಸ್ವಾಗತಿಸಿ ರಾಜ್ಯ ಸಮಿತಿ ಸದಸ್ಯ ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ ಧನ್ಯವಾದ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.