ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ) : ತಾಲ್ಲೂಕಿನ ಕಲ್ಲೂರು ಗ್ರಾಮದ ಆದರ್ಶ ವಿದ್ಯಾಲಯದಲ್ಲಿ 2023-24ನೇ ಸಾಲಿನ 6 ನೇ ತರಗತಿ ದಾಖಲಾತಿಗೆ ನಡೆಸುವ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆ ಬರೆಯಲು ಅಂತರ್ಜಾಲದ ಮೂಲಕ ಮಾ .4 ರವರೆಗೆ ಸಲ್ಲಿಸಬಹುದಾಗಿದೆ ಎಂದು ವಿದ್ಯಾಲಯದ ಮುಖ್ಯ ಶಿಕ್ಷಕಿ ಕೆ. ಮಮತಾ ರಾಣಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು 2022-23ನೇ ಸಾಲಿನಲ್ಲಿ 5 ನೇ ತರಗತಿ ಓದುತ್ತಿರ ಬೇಕು.
ಶ್ರೀನಿವಾಸಪುರ ತಾಲ್ಲೂಕಿನವರಾಗಿರಬೇಕು ಅಥವಾ ತಂದೆ , ತಾಯಿ ತಾಲ್ಲೂಕಿನ ನಿವಾಸಿಗಳಾಗಿರ ಬೇಕು. ಅರ್ಜಿಯೊಂದಿಗೆ ವಿದ್ಯಾರ್ಥಿಯ ಎಸ್ ಎ ಟಿ ಎಸ್ ಸಂಖ್ಯೆ , ಆಧಾರ್ ಸಂಖ್ಯೆ , ಪಾಸ್ಪೋರ್ಟ್ ಅಳತೆ ಭಾವಚಿತ್ರ , ಮೀಸಲಾತಿ ಬಯಸುವ ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಣ ಪತ್ರದ ಸಂಖ್ಯೆ , ಪೋಷಕರ ಮೊಬೈಲ್ ಸಂಖ್ಯೆ , ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದಲ್ಲಿ ಪ್ರಮಾಣ ಪತ್ರದ ಪ್ರತಿ , ವಿದ್ಯಾರ್ಥಿ ಬೇರೆ ತಾಲ್ಲೂಕಿನಲ್ಲ ಓದುತ್ತಿದ್ದು , ತಂದೆ , ತಾಯಿ ಈ ತಾಲ್ಲೂಕಿನವರಾಗಿದ್ದಲ್ಲಿ ತಹಶೀಲ್ದಾರ್ ನೀಡಿದ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ ಪರೀಕ್ಷೆ ಮಾ .26 ರಂದು ನಡೆಯಲಿದೆ . ಆಯ್ಕೆ ಪರೀಕ್ಷೆಗೆ 3 ರಿಂದ 5 ನೇ ತರಗತಿ ಪಠ್ಯ ಪುಸ್ತಕ ಆಧರಿಸಿ ನಿಯಮಾನುಸಾರ ಪರೀಕ್ಷೆನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ 8660568686 ಸ೦ಖ್ಯೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.