(www.vknews.in) : ಇತ್ತೀಚೆಗೆ ಮಂಗಳೂರಿನಲ್ಲಿ ಪಕ್ಷವೊಂದರ ಚುನಾವಣಾ ಪ್ರಚಾರ ಸಭೆಯಲ್ಲಿ, ಈಶ್ವರಪ್ಪನವರು,ಸಾಂದರ್ಭಿಕವಾಗಿ ಸ್ಥಳೀಯವಾಗಿ,ಧಾರ್ಮಿಕ ಕೇಂದ್ರದಿಂದ ಮೊಳಗಿದ ಆಝಾನ್ ದ್ವನಿಗೆ ವ್ಯತ್ಯಸ್ತವಾಗಿ ಪ್ರತಿಕ್ರಿಯಿಸಿ,ತನ್ನ ಭಾಷಣದಲ್ಲಿ, ಮೈಕ್ ಇಲ್ಲದೆ ಆಝಾನ್ ಕೂಗಿದರೆ ಅಲ್ಲಾಹನಿಗೆ ಕೇಳಿಸುವುದಿಲ್ಲವೆ?,ಅಲ್ಲಾಹನು ಕಿವುಡನೆ? ಇತ್ಯಾದಿಯಾಗಿ ಪ್ರಶ್ನಿಸಿದ್ದಾರೆ.
ಈಶ್ವರಪ್ಪರಿಗೆ ಆರಾಧನಾ ಕರ್ಮಗಳ ಶಬ್ದಗಳು ಬಹುಶ ಕರ್ಕಶವಾಗಿ ಆಲಿಕೆ ಆಗುತ್ತಿದೆ. ಇತರರಿಗೆ ಇಂಪು ನೀಡುವ ದ್ವನಿಗಳು ಈಶ್ವರಪ್ಪ ನವರಿಗೆ ಕರ್ಕಶ ದ್ವನಿ ಆಗಿ ಆಲಿಕೆ ಆಗುತ್ತಿದೆ.ಈಶ್ವರಪ್ಪ ನವರು ಬಹುಶ ಶ್ರವಣ ಕರ್ಕಷತೆಯಿಂದ ಬಳಲುತ್ತಿದ್ದಾರೆ.ಇತ್ತೀಚೆಗೆ ಈಶ್ವರಪ್ಪನವರು ತನ್ನ ಮಾತಿನ ಪ್ರಬುದ್ಧತೆಯನ್ನು ಕಳೆದು ಕೊಂಡಿದ್ದಾರೆ. ಅವರು ಧಾರ್ಮಿಕ ನಿಂದನೆ ಹೊರತಾದ ಇತರ ವಿಷಯಗಳ ಬಗ್ಗೆಗಿನ ಸ್ವಂತಿಕೆಯನ್ನು ಕಳೆದು ಕೊಂಡಿದ್ದಾರೆ.ತಾನು ಪ್ರವಾಸ ಕೈಗೊಂಡಲ್ಲಿ ತನ್ನ ಭಾಷಣದಲ್ಲಿ ಜನರ ನೈಜ ಸಮಸ್ಯೆಯ ಬದಲಿಗೆ ಮತೀಯ ಪ್ರಚೋದಿತ ಹೇಳಿಕೆ ನೀಡುತ್ತಿದ್ದಾರೆ.
ಈಶ್ವರಪ್ಪನವರ ಇಂತಹ ಹೇಳಿಕೆ ಖಂಡನೀಯ.ಮತೀಯ ನಿಂದನೀಯ. ಬಿಜೆಪಿ ಪಕ್ಷದ ಉನ್ನತ ನಾಯಕರು ಈಶ್ವರಪ್ಪನವರ ನಾಲಗೆಯನ್ನು ಹದ್ದು ಬಸ್ತಿನಲ್ಲಿ ಇಡಲು ತಿಳಿಸಲಿ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.