ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ಕಲ್ಲು, ಚಪ್ಲಲಿ ತೂರಿದ್ದಾರೆ.
ಪ್ರತಿಭಟನೆ ನಿರತ ಬಂಜಾರ ಸಮುದಾಯದ ನೂರಾರು ಜನರು ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಕೇಡ್ ಮುರಿದು ನುಗ್ಗಿ, ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಿದ್ದರೆ ಕೆಲವು ಯುವಕರು ಕಚೇರಿ ಚಾವಣಿ ಏರಿ ಬಿಜೆಪಿ ಬಾವುಟವನ್ನು ಕಿತ್ತುಹಾಕಿದರು. ಮೋದಿ ಚಿತ್ರವಿದ್ದ ಫ್ಲಕ್ಸ್ ಗಳನ್ನು ಹರಿದು ಹಾಕಿದರು. ಅಲ್ಲದೇ ಯಡಿಯೂರಪ್ಪ ನವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಲಾಗಿದ್ದ ಸೀರೆಗಳನ್ನು ತಂದು ಅವರ ಮುಂದೆ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳೂ ಆಗಿವೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ.
#BREAKING Members of #Banjara community attacked senior #BJP leader BS Yediyurappa's house in #Shivamogga demanding to withdraw #Karnataka govt's decision for internal reservation. #KarnatakaElection2023 pic.twitter.com/bAka5goBie — Imran Khan (@KeypadGuerilla) March 27, 2023
#BREAKING Members of #Banjara community attacked senior #BJP leader BS Yediyurappa's house in #Shivamogga demanding to withdraw #Karnataka govt's decision for internal reservation. #KarnatakaElection2023 pic.twitter.com/bAka5goBie
— Imran Khan (@KeypadGuerilla) March 27, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.