(www.vknews.in) : ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಹಲವು ವರ್ಷಗಳಿಂದ ನಡೆಸುತ್ತಾ ಬರುತ್ತಿರುವ ಯು.ಎ.ಇ ಯ ಕರಾವಳಿಯ ಕುಟುಂಬಗಳು ಆತರದಿಂದ ಕಾಯುತ್ತಿರುವ ” ಗ್ರಾಂಡ್ ಕರಾವಳಿ ಪ್ಯಾಮಿಲಿ ಮುಲಾಖತ್” 2014 ಜನವರಿ 14 ಆದಿತ್ಯವಾರ ಯು ಎ ಇ ಯ ಅಜ್ಮಾನ್ ಎಮಿರೇಟ್ ನಲ್ಲಿರುವ ಸುಸಜ್ಜಿತವಾದ “AL RAWDA FARM HOUSE” ನಲ್ಲಿ ಬೆಳಿಗ್ಗೆ ಘಂಟೆ 10 ರಿಂದ ಸಾಯಂಕಾಲ 7 . 30 ರವರಿಗೆ ನಡೆಯಲಿರುವುದು.
ಈ ಕಾರ್ಯಕ್ರಮ ದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಇಸ್ಲಾಂ ಚೌಕಟ್ಟಿನೊಳಗೆ ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಮತ್ತು ಇನ್ನಿತರ ಸ್ಪರ್ಧೆಗಳು ನಡೆಯಲಿರುವುದಾಗಿ ಪ್ಯಾಮಿಲಿ ಮುಲಾಖತ್ ಇದರ ಸ್ವಾಗತ ಸಮಿತಿ ಸಾರಥಿಗಳಾಗಿ ಹಾಜಿ. ನವಾಜ್ ಕೋಟೆಕ್ಕಾರ್, ಶುಕೂರ್ ಮಣಿಲ, ಅಬ್ದುಲ್ ಲತೀಫ್ ತಿಂಗಳಾಡಿ, ಶರೀಫ್ ಬೊಲ್ಮಾರ್ ಅವರನ್ನು ನೇಮಕ ಮಾಡಲಾಯಿತು.
ಸಮಿತಿಯ ಸಲಹೆಗಾರರಾಗಿ ಮತ್ತು ಸದಸ್ಯರಾಗಿ ಲತೀಫ್ ಮುಲ್ಕಿ, ಉಮ್ಮರ್ ಮಾಸ್ಟರ್ ಸುಳ್ಯ, ಸಲಾಂ ಕಕ್ಕಿಂಜೆ, ಇಬ್ರಾಹಿಂ ಹಾಜಿ ಕಿನ್ಯ, ಅಬ್ದುಲ್ ರಹಿಮಾನ್ ಸಜಿಪ, ಹಾಜಿ.ಇಕ್ಬಾಲ್ ಕಣ್ಣಂಗಾರ್, ಅಶ್ರಫ್ ಸತ್ತಿಕಲ್, ಅಕ್ಬರ್ ಸುರತ್ಕಲ್, ಇಬ್ರಾಹಿಂ ಕಳತ್ತೂರ್, ವಹಾಬ್ ಕಂಚಿಲಕುಂಜ, ನಜೀರ್ ಕುಪ್ಪಟ್ಟಿ, ಸಮದ್ ಬಿರಾಲಿ, ರಿಯಾಜ್ ಕುಳಾಯಿ, ರಿಯಾಜ್ ಮೂಡುತೋಟ, ರಪೀಕ್ ಸತ್ತಿಕಲ್, ಇಸ್ಮಾಯಿಲ್ ಬಾಬಾ, ಕಮರುದ್ದೀನ್ ಗುರುಪುರ, ಶುಕೂರ್ ಜೋಕಟ್ಟೆ, ರಪೀಕ್ ಸತ್ತಿಕಲ್, ಸಮೀರ್ ಕೊಳ್ನಾಡ್, ಹಾಜಿ.ಎಂ.ಇ.ಸುಲೈಮಾನ್, ಹಸನ್ ಬಾವ ಹಳೆಯಂಗಡಿ, ಅಶ್ರಫ್ ಕಾನಾ, ಸಿದ್ದಿಕ್ ಉಳ್ಳಾಲ ಹಾಗು ಎಲ್ಲ ಯುನಿಟ್ ಗಳ ರಾಷ್ಟೀಯ ಸಮಿತಿ ಪ್ರತಿನಿದಿಗಳನ್ನೊಳಗೊಂಡ ಸಮಿತಿ ರಚಿಸಿ ಮುಲಾಖತ್ ಯಶಸ್ವಿಗೆ ಶ್ರಮಿಸಲು ವಿವಿಧ ಜವಾಬ್ದಾರಿಗಳನ್ನು ನೀಡಲಾಯಿತು.
ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಕಿ ತಂಘಳ್ ರವರು ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ ಎಂ.ಇ.ಮೂಳೂರು ಪ್ರದಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು, ಕೋಶಾಧಿಕಾರಿ ಅಬ್ದುಲ್ಲಾ ಪೆರುವಾಯಿ ಸಲಹೆಗಾರರಾದ ಹಾಜಿ.ಅಬೂಸ್ವಾಲೀಹ್ ಇವರುಗಳ ಉಪಸ್ಥಿತಿಯಲ್ಲಿ ಸ್ವಾಗತ ಸಮಿತಿ ಯನ್ನು ಘೋಷಣೆ ಮಾಡಿದರು. ಎಲ್ಲಾ ಅನಿವಾಸಿ ಕನ್ನಡಿಗ ಹಾಗೂ ನೆರೆ ಜಿಲ್ಲೆ ಯಾದ ಕಾಸರಗೋಡು ಪ್ರದೇಶದವರು ಕುಟುಂಬ ಸಮೇತ ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.