ಕೋಝಿಕ್ಕೋಡ್ (www.vknews.in) : ಚುನಾವಣೆಯ ನಂತರವೂ ದೇಶ ಅವಿಭಜಿತವಾಗಿ ಉಳಿಯಬೇಕು ಹಾಗಾಗಿ ಆಡಳಿತ ಮತ್ತು ರಾಜಕೀಯ ನಾಯಕತ್ವದಲ್ಲಿರುವವರು ತಮ್ಮ ಮಾತುಗಳನ್ನು ಪ್ರಬುದ್ಧತೆಯಿಂದ ಬಳಸಬೇಕು, ಕೋಮು ವಿಭಜಕ ಹೇಳಿಕೆಗಳು ಅಂತಿಮವಾಗಿ ದೇಶಕ್ಕೇ ಹಾನಿ ಮಾಡುತ್ತದೆ ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಸಾಂವಿಧಾನಿಕ ಸ್ಥಾನಗಳಲ್ಲಿ ಕುಳಿತುಕೊಳ್ಳುವವರು ಕಾರ್ಯಗಳು ಮತ್ತು ಹೇಳಿಕೆಗಳಲ್ಲಿ ಸ್ಥಾನದ ಘನತೆಯನ್ನು ಎತ್ತಿಹಿಡಿಯಬೇಕು. ಚುನಾವಣೆ ಗೆಲ್ಲಲು ಕೋಮುವಾದವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡವರು ರಾಷ್ಟ್ರದ ಮೈಮೇಲೆ ಮಾಡಿದ ಗಾಯಗಳು ಆಳವಾದವು. ಇದು ವಾಸಿಯಾಗದ ಹುಣ್ಣಾಗಿ ನಮ್ಮ ರಾಷ್ಟ್ರವನ್ನು ಅಸ್ವಸ್ಥಗೊಳಿಸುತ್ತದೆ.
ಪ್ರಧಾನಿಯಂತಹ ವ್ಯಕ್ತಿ ಇಂತಹ ಹೇಳಿಕೆ ನೀಡಬಾರದಿತ್ತು. ಮುಸಲ್ಮಾನರ ಮನಸ್ಸನ್ನು ನೋಯಿಸುವ ಹೇಳಿಕೆಯನ್ನು ತಿದ್ದಲು ಅವರು ಸಿದ್ಧರಾಗಿರಬೇಕು. ಕಾಂತಪುರಂ ಉಸ್ತಾದ್ ಅವರ ಹೇಳಿಕೆಯು ಭಾರತದ ಮುಸ್ಲಿಂ ಅಲ್ಪಸಂಖ್ಯಾತರನ್ನು ದ್ವೇಷದ ರಾಜಕೀಯಕ್ಕೆ ಎಳೆಯುವುದು ಅತ್ಯಂತ ತಪ್ಪು ಕ್ರಮವಾಗಿದೆ ಎಂದು ಸೂಚಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.