ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ಸ್ವತಂತ್ರ ಪತ್ರಕರ್ತ ರಿಝ್ವಾನ ತಬಸ್ಸುಮ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ಪೊಲೀಸರು ನಗರದ ನಿವಾಸಿ ಶಮೀಮ್ ನೊಮಾನಿ ಎಂಬಾತನನ್ನು ಬಂಧಿಸಿದರೆ, ‘ಅಬೆಟ್ಮೆಂಟ್’ ನಲ್ಲಿ ಅವರ ಪಾತ್ರದ ಬಗ್ಗೆ ತನಿಖೆಯು ಅವರ ದೂರವಾಣಿ ದಾಖಲೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಪೊಲೀಸರು ಹೇಳಿದರು.
ತಬಸ್ಸಮ್ ದಿ ವೈರ್ ಹಿಂದಿ, ದಿ ವೈರ್, ದಿ ಪ್ರಿಂಟ್ ಸೇರಿದಂತೆ ವಿವಿಧ ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗಾಗಿ ಅವರು ನಿಯಮಿತವಾಗಿ ವರದಿ ಮಾಡುತ್ತಿದ್ದರು.
ಮೇ 4 ರ ಬೆಳಿಗ್ಗೆ ಆಕೆಯ ಮನೆಯವರು ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೆ ಹಲವಾರು ಬಾರಿ ಬಾಗಿಲು ಬಡಿದರೂ ತನ್ನ ಕೋಣೆಯಿಂದ ಹೊರಬರದಿದ್ದಾಗ ಕುಟುಂಬಕ್ಕೆ ಅನುಮಾನ ಬಂದು ಪೊಲೀಸರನ್ನು ಕರೆದರು. ಪೊಲೀಸರು ಬಂದು ಕೋಣೆಯ ಬಾಗಿಲು ಮುರಿದಾಗ ಆಕೆಯಯು ಫ್ಯಾನ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡರು.
ರಿಝ್ವಾನಾ ಅವರ ಮರಣದ ನಂತರ, ದೇಶಾದ್ಯಂತದ ಪತ್ರಕರ್ತರು, ಮಾಜಿ ಸಹೋದ್ಯೋಗಿಗಳು ಗೌರವವಾಗಿ ಟ್ವೀಟರ್ ಗಳಲ್ಲಿಯೂ ಹಾಗೆಯೂ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು the wire ವರದಿ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.