ಕುಟುಂಬಕ್ಕಾದ ಅನ್ಯಾಯ-ಅವಮಾನ ಸಹಿಸಲಾರೆ: ಮೃತನ ಸಹೋದರ ಹಸೈನಾರ್
ಸಕಲೇಶಪುರ (www.vknews.com) : ತಾಲೂಕಿನ ಹಾನುಬಾಳು ಶವ ದಫನ ನಿರಾಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸುಲೇಮಾನ್ ಸಹೋದರ ಹಸೈನಾರ್ ಮಸೀದಿ ಸಮಿತಿಯ ವಿರುದ್ದ ಸಮಾಜಿಕ ಬಹಿμÁ್ಕರ ಬೆದರಿಕೆ ಹಾಗೂ ಸಮಾಜಿಕ ಅವಮಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಗುರುವಾರ ಮದ್ಯಾಹ್ನ ಉಪವಿಭಾಗಾಧಿಕಾರಿ, ತಹಸೀಲ್ದಾರ್, ವಕ್ವ್ ಸಲಹ ಸಮಿತಿ ಹಾಗು ಗ್ರಾಮಾಂತರ ಪೆÇೀಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ವಿವರ: ಸುಲೈಮಾನ ಎಂಬ ವ್ಯಕ್ತಿ ಅಂಗಾಂಗ ವೈಫಲ್ಯದಿಂದ ಹಾಸನದ ಮಿಷಿನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಅಂತಿಮ ಸಂಸ್ಕಾರವನ್ನು ಸ್ವಗ್ರಾಮ ಹಾನುಬಾಳ್ ಗ್ರಾಮದಲ್ಲಿ ನೆರವೇರಿಸಲು ಕುಟುಂಬ ತೀರ್ಮಾನಿಸಿತ್ತು.
ದಫನ್ ಮಾಡಲು ಹಾನುಬಾಳ್ ಜಮಾತ್ ತಹಸೀಲ್ದಾರ್ ಮತ್ತು ವೈದ್ಯರಿಂದ ನಿರಕ್ಷೇಪಣಾ ಪತ್ರ ತರುವಂತೆ ಷರತ್ತು ವಿಧಿಸಿದ್ದು ನಂತರ ನಡೆದ ಬೆಳವಣಿಗೆಯಲ್ಲಿ ಮೃತರ ಕುಟುಂಬ ರಾತ್ರಿ 10 ಗಂಟೆ ಸಮಯದಲ್ಲಿ ಆನೆಮಹಲ್ ಗ್ರಾಮದಲ್ಲಿ ಶವವನ್ನು ದಫನ ಮಾಡಲಾಯಿತು. ಈ ಪ್ರಕರಣ ಸಾರ್ವಜನಿಕರ ಟೀಕೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿವಿಧ ಇಲಾಖೆಗಳಿಗೆ ದೂರು ನೀಡಿದ ಮೃತನ ಸಹೋದರ ಸುದ್ದಿಗಾರರೊಂದಿಗೆ ಮಾತನಾಡಿ. ಮೃತ ಸುಲೇಮಾನ್ 48 ವಯಸ್ಸಿನವರಾಗಿದ್ದು ನನ್ನ ಸಹೋದರರ ಸಾವು ನನಗೆ ಶಾಕ್ ನೀಡಿತ್ತು. ಈ ಮೊದಲೇ ನನ್ನ ಹಿರಿಯ ಇಬ್ಬರು ಸಹೋದರರು ಮೃತಪಟ್ಟಿದ್ದರು. ಸುಲೈಮಾನ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲು ನಾನು ಪ್ರಯತ್ನ ಮಾಡುತ್ತಿದ್ದೆ ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸಹೋದರ ಸಾವನ್ನಪ್ಪಿದ ನಂತರ ಹಾನುಬಾಳ್ ನಲ್ಲಿ ದಫನ್ ಮಾಡಲು ತೀರ್ಮಾನಿಸಿ ಈ ವಿಷಯವನ್ನು ಮಸೀದಿ ಅಧ್ಯಕ್ಷರಿಗೆ ತಿಳಿಸಿದೆ. ಅವರುತಹಸೀಲ್ದಾರ್ ಹಾಗೂ ವೈದ್ಯರಿಂದ ನಿರಕ್ಷೇಪಣ ಪತ್ರ ತರುವಂತೆ ತಿಳಿಸಿದರು. ಮಸೀದಿ ಅಧ್ಯಕ್ಷ ನನಗೆ ಮುಖಾಮುಖಿ ಯಾಗಲಿಲ್ಲ. ನನಗೆ ಏನು ಮಾಡುವುದು ತಿಳಿಯಲಿಲ್ಲ. ಆಸ್ಪತ್ರೆಯಿಂದ ಶವವನ್ನು ಅಂಬುಲೆನ್ಸ್ ಮೂಲಕ ತೆಗೆದುಕೊಂಡು ಬಂದೆ. ವೈದ್ಯರಿಗೂ ತಿಳಿಸಿ ಅಗತ್ಯವಾದ ಪತ್ರಗಳನ್ನು ಸಹ ಪಡೆದುಕೊಂಡೆ.
ನಂತರ ಸಹಾಯಕ್ಕಾಗಿ ಜಿಲ್ಲಾ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರಿಗೆ ಫೆÇೀನ್ ಮುಖಾಂತರ ಮಾತನಾಡಿದ್ದೆ ಅವರು ತಹಸೀಲ್ದಾರ್ ರವರೊಂದಿಗೆ ಮಾತನಾಡಿದರು. ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸೋತುಹೋಗಿದ್ದೆ ಎಲ್ಲಾದರೂ ಒಂದು ಕಡೆ ಸೋದರನನ್ನು ಮಣ್ಣು ಮಾಡಿದರೆ ಸಾಕು ಎನಿಸುತ್ತಿತ್ತು ಎಂದರು, ಆದರೆ ಈಗ ನನಗೆ ಅನ್ಯಾಯವಾಗಿದೆ ತನ್ನ ಕುಟುಂಬಕ್ಕೆ ಅವಮಾನವಾಗಿದೆ ಎಂದು ಅರಿವಾಗಿದೆ. ನಾನು ಈ ಅನ್ಯಾಯ ಸಹಿಸುವುದಿಲ್ಲ, ನ್ಯಾಯಕ್ಕಾಗಿ ಅಲೆಯುತ್ತಾನೆ ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.