(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَا أَحْمَدُ بْنُ يُونُسَ، حَدَّثَنَا زَائِدَةُ، عَنِ الأَعْمَشِ، عَنْ أَبِي صَالِحٍ، عَنْ أَبِي هُرَيْرَةَ، قَالَ قَالَ رَسُولُ اللَّهِ صلى الله عليه وسلم ” مَا مِنْ رَجُلٍ يَسْلُكُ طَرِيقًا يَطْلُبُ فِيهِ عِلْمًا إِلاَّ سَهَّلَ اللَّهُ لَهُ بِهِ طَرِيقَ الْجَنَّةِ وَمَنْ أَبْطَأَ بِهِ عَمَلُهُ لَمْ يُسْرِعْ بِهِ نَسَبُهُ ”.
19. ಅಬೂ ಹುರೈರಾ (ರ) ವರದಿ: ಅಲ್ಲಾಹುವಿನ ಪ್ರವಾದಿ (ﷺ) ಹೇಳಿದರು: ಯಾರಾದರೂ ಜ್ಞಾನದ ಹುಡುಕಾಟದಲ್ಲಿ ಒಂದು ಮಾರ್ಗವನ್ನು ಅನುಸರಿಸಿದರೆ, ಅಲ್ಲಾಹನು ಆ ಮೂಲಕ ಅವನಿಗೆ ಸ್ವರ್ಗದ ಹಾದಿಯನ್ನು ಸುಲಭಗೊಳಿಸುತ್ತಾನೆ; ಮತ್ತು ಯಾರಾದರೂ ಇದರಿಂದ ದೂರ ಸರಿದಲ್ಲಿ ಅವನ ವಂಶ ಪರಂಪರೆಯಲ್ಲಿ ನಿಧಾನಗತಿಯು ಸಂಭವಿಸುವುದು.
ಇಹ ಪರಲೋಕಗಳ ವಿಜಯಕ್ಕಾಗಿ ಜ್ಞಾನಾರ್ಜನೆ ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ. ಜ್ಞಾನಾರ್ಜನೆಯಿಂದ ಪ್ರತಿಯೊಂದು ವಿಷಯದಲ್ಲೂ ಅವನಿಗೆ ಅವನ ದರ್ಜೆಯನ್ನು ಮೇಲಕ್ಕೆತ್ತಲು ಸಾಧ್ಯ. ಪ್ರವಾದಿಯವರ ವಚನದಂತೆ ಅವನ ಅಂತಿಮ ಗುರಿಯಾಗಿರುವ ಸ್ವರ್ಗದ ಹಾದಿ ಸುಲಭವಾಗಿ ಕೈ ಸೇರುತ್ತದೆ ಎನ್ನುದರಲ್ಲಿ ಯಾವುದೇ ಸಂಶಯವಿಲ್ಲ.
حَدَّثَنَا عَمْرُو بْنُ عَوْنٍ، أَخْبَرَنَا خَالِدٌ، ح وَحَدَّثَنَا مُسَدَّدٌ، حَدَّثَنَا خَالِدٌ، – الْمَعْنَى – عَنْ بَيَانِ بْنِ بِشْرٍ، – قَالَ مُسَدَّدٌ أَبُو بِشْرٍ – عَنْ وَبَرَةَ بْنِ عَبْدِ الرَّحْمَنِ، عَنْ عَامِرِ بْنِ عَبْدِ اللَّهِ بْنِ الزُّبَيْرِ، عَنْ أَبِيهِ، قَالَ قُلْتُ لِلزُّبَيْرِ مَا يَمْنَعُكَ أَنْ تُحَدِّثَ عَنْ رَسُولِ اللَّهِ صلى الله عليه وسلم كَمَا يُحَدِّثُ عَنْهُ أَصْحَابُهُ فَقَالَ أَمَا وَاللَّهِ لَقَدْ كَانَ لِي مِنْهُ وَجْهٌ وَمَنْزِلَةٌ وَلَكِنِّي سَمِعْتُهُ يَقُولُ ” مَنْ كَذَبَ عَلَىَّ مُتَعَمِّدًا فَلْيَتَبَوَّأْ مَقْعَدَهُ مِنَ النَّارِ ”
20. ಅಬ್ದುಲ್ಲಾ ಬಿನ್ ಅಲ್-ಜುಬೈರ್ (ರ) ಅವರ ತಂದೆಯ ಅಧಿಕಾರದ ಮೇಲೆ ಹೇಳಿದರು: ನಾನು ಅಲ್-ಜುಬೈರ್ (ರ) ಅವರನ್ನು ಕೇಳಿದೆ: ಅಲ್ಲಾಹುವಿನ ಪ್ರವಾದಿ (ﷺ) ಯವರಿಂದ ಹದೀಸ್ ಗಳನ್ನು ನಿರೂಪಿಸುವುದರಿಂದ ನಿಮ್ಮನ್ನು ಏನು ತಡೆಯುತ್ತದೆ? ಅವರ ಸಹಚರರು ಅವರಿಂದ ನಿರೂಪಿಸಿದಂತೆ? ಆಗ ಅವರು ಹೇಳಿದರು: ಅಲ್ಲಾಹನಾಣೆ ನಾನು ಅವರಿಗೆ ತುಂಬಾ ಹತ್ತಿರವಾಗಿದ್ದೆ. ಆದರೆ ನಾನು ಅವರನ್ನು(ﷺ) ಕೇಳಿದೆ. ಆಗ ಅಲ್ಲಾಹನ ಪ್ರವಾದಿ(ﷺ) ಹೇಳಿದರು, “ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವವನು ಖಂಡಿತವಾಗಿಯೂ ನರಕದಲ್ಲಿರುವ ತನ್ನ ವಾಸಸ್ಥಾನಕ್ಕೆ ಬರುವನು” ಎಂದು.
ಯಾರಾದರೂ ತನ್ನ ಇಷ್ಟದಂತೆ ಅಲ್ಲಾಹನ ಪ್ರವಾದಿಯವರ ವಚನಗಳನ್ನು ವಿಶ್ಲೇಷಿಸಿದಲ್ಲಿ ಮತ್ತು ತನ್ನದೇ ಆದ ಅರ್ಥವನ್ನು ಕೊಟ್ಟಲ್ಲಿ ಮತ್ತು ಅದನ್ನು ಪ್ರಚಾರಪಡಿಸಿದಲ್ಲಿ ಅವನ ವಾಸಸ್ಥಾನವು ನರಕವಾಗಿರುವುದು ಎಂಬುದನ್ನು ನಾವು ತಿಳಿಯಲೇಬೇಕು.
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.