ಜಿದ್ದಾ(www.vknews.in): ತನ್ನ ಮಿತ್ರನೊಂದಿಗೆ ದಿನಾಂಕ 23/09/2020 ರಂದು ರಿಯಾದ್ ನಿಂದ ಜಿದ್ದಾ ಗೆ ಖಾಸಗಿ ಕಾರ್ಯ ನಿಮಿತ್ತ ಬರುತಿದ್ದ ಕುಂದಾಪುರ ಗಂಗೊಳ್ಳಿ ಯ ಇಫ್ತಿಕಾರ್ ಮಟ್ಟ ಎಂಬ ವ್ಯಕ್ತಿಯು ತಾಯೀಫ್ ಸಮೀಪ ಸಫಾ ಎಂಬಲ್ಲಿ ತಾನು ಸಂಚರಿಸುತ್ತಿದ್ದ ಕಾರ್ ಮತ್ತೊಂದು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿ ಅಸುನೀಗಿ,ಶರಫುದ್ದೀನ್ ಎಂಬವರು ತೀವ್ರ ಗಾಯಗೊಂಡು ತಾಯೀಫ್ ನ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಇಫ್ತಿಕಾರ್ ರವರು ಸೌದಿ ರಾಷ್ಟ್ರೀಯ ದಿನದ ರಜೆಯನ್ನು ಕಳೆಯಲು ಮಿತ್ರನೊಂದಿಗೆ ಜಿದ್ದಾಗೆ ಪ್ರಯಾಣ ಬೆಳೆಸಿದ್ದರು.ಇಫ್ತಿಕಾರ್ ರವರ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆಗೆ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫೋರಮ್ ನ್ನು ಸಂಪರ್ಕಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ತಾಯಿಫ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಮಲಿಕ್ ಇಡ್ಯಾ,ಅಶ್ರಫ್ ಸುನ್ನತ್ ಕೆರೆ ಮತ್ತು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷರಾದ ಇಮ್ತಿಯಾಜ್ ಕುಂದಾಪುರ ನೇತೃತ್ವದಲ್ಲಿ ದಾಖಲೆ ಪತ್ರಗಳನ್ನು ಸಂಗ್ರಹಿಸಿ,ಕ್ಲಪ್ತ ಸಮಯಕ್ಕೆ ಸಂಬಂಧಪಟ್ಟ ಇಲಾಖೆಗೆ ದಾಖಲೆಯನ್ನು ಸಲ್ಲಿಸಿ ಮೃತರ ಸಹೋದರ ಶೊಹೈಬ್ ಮಟ್ಟ ರವರಿಗೆ ಮೃತದೇಹವನ್ನು ಆಸ್ಪತ್ರೆಯು ಹಸ್ತಾಂತರಿಸಿತು.ಅನಂತರ ದಿನಾಂಕ 24/09/2020 ರಂದು ಮಗ್ರಿಬ್ ನಮಾಜಿನ ಬಳಿಕ ತಾಯೀಫ್ ನ ಇಬ್ರಾಹಿಂ ಜಾಫ್ಫಾಲಿ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು,ಮೃತರ ಅಂತ್ಯಕ್ರಿಯೆಯಲ್ಲಿ ಡಿ ಕೆ ಎಸ್ ಸಿ ಕಾರ್ಯದರ್ಶಿ ಮಜೀದ್ ಕಣ್ಣಂಗಾರ್,ಕೆ ಸಿ ಎಫ್ ಅಧ್ಯಕ್ಷ ಇಕ್ಬಾಲ್ ಮದನಿ,ಐ ಎಸ್ ಎಫ್ ಸದಸ್ಯರಾದ ರಫೀಕ್ ಬುಡೋಳಿ,ತಾಯೀಫ್ ಫೈಟರ್ಸ್ ನ ಅಲ್ತಾಫ್ ಗುರುಪುರ,ಅಮೀನ್ ಕುಂದಾಪುರ ಮತ್ತು ಮೃತರ ಸಂಬಂದಿಕರು ಮತ್ತು ಮಿತ್ರರು ಭಾಗವಹಿಸಿದ್ದರು.ಮೃತರ ಅಂತ್ಯಕ್ರಿಯೆಗೆ ಬೇಕಾದ ರಾಯಭಾರ ಕಚೇರಿಯ ದಾಖಲೆಯನ್ನು ಸಂಗ್ರಹಿಸಲು ಅಶ್ರಫ್ ಬಜ್ಪೆ ಮತ್ತು ಲತೀಫ್ ತಬೂಕ್ ನೆರವಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.