ರಾಜ್ಯ ಫೈಝೀಸ್ ವತಿಯಿಂದ ಪುತ್ತೂರಿನಲ್ಲಿ ರಬೀಹ್ ಕ್ಯಾಂಪೈನ್ , ಮೌಲಿದ್ ಸಂಗಮ
ಪುತ್ತೂರು (www.vknews.com) : ಪವಿತ್ರ ರಬೀಉಲ್ ಅವ್ವಲ್ ಮಾಸದ ಭಾಗವಾಗಿ ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ ‘ ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ ‘ ಎಂಬ ಧ್ಯೇಯ ವಾಕ್ಯದಲ್ಲಿ ರಬೀಹ್ ಕ್ಯಾಂಪೈನ್ ಪ್ರಯುಕ್ತ ಮೌಲಿದ್ ಮತ್ತು ಮದುಹುನ್ನೆಬೀ ಕಾರ್ಯಕ್ರಮ ಪುತ್ತೂರು ಸಿರಾಜುಲ್ ಹುದಾ ಮದ್ರಸಾದಲ್ಲಿ ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನುಲ್ ಫೈಝಿಯವರ ಅಧ್ಯಕ್ಷತೆಯಲ್ಲಿ ನಡೆಯಿತು .
ರಾಜ್ಯದಾದ್ಯಂತ ಪ್ರಮುಖ ನಿಗದಿತ ಸ್ಥಳಗಳಲ್ಲಿ ನಡೆಯುವ ಎರಡನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಪ್ರವಾದಿ ಮುಹಮ್ಮದ್ ಮುಸ್ತಫಾ( ಸ )ರ ಜನನದಿಂದ ಅನುಗ್ರಹೀತಗೊಂಡ ಈ ಪುಣ್ಯ ಮಾಸದಲ್ಲಿ ಪ್ರವಾದಿ ಪ್ರಕೀರ್ತನೆಗಳು ಎಲ್ಲೆಡೆ ಮೊಳಗುತ್ತಿದೆ . ಹಲವಾರು ಸಂಕಷ್ಟಗಳಿಂದ ಆವೃತವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಈ ಪುಣ್ಯ ಪ್ರಕೀರ್ತನೆಗಳು ಎಲ್ಲದಕ್ಕೂ ಪರಿಹಾರ ಮಾರ್ಗವಾಗಿ ಪ್ರಯೋಜನಕಾರಿಯಾಗಲಿದೆ . ಅದರ ಭಾಗವಾಗಿ ನಡೆಯುವ ಮೌಲಿದ್ ಮಜ್ಲಿಸುಗಳು ಸಾವಕಾಶವಾಗಿ ಕ್ರಮಬದ್ಧವಾಗಿ ನಡೆದು ಒಳಿತಿನ ಸಿರಿವಂತಿಕೆಯಿಂದ ಕೂಡಿರಲಿ ಎಂದು ಕರೆನೀಡಿದರು .
ಸಯ್ಯಿದ್ ಎಸ್.ಎಂ ಮುಹಮ್ಮದ್ ತಂಙಳ್ ಸಾಲ್ಮರ ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು . ರಾಜ್ಯ ಫೈಝೀಸ್ ಪ್ರಮುಖರಾದ ಮೂಸಲ್ ಫೈಝಿ ಪ್ರಮೇಯ ಪ್ರಭಾಷಣ ನಡೆಸಿದರು. ಉಮರ್ ಫೈಝಿ ಸಾಲ್ಮರ ಮುಖ್ಯ ಭಾಷಣ ಮಾಡಿದರು. . ಸಮಿತಿಯ ಕೋಶಾಧಿಕಾರಿ ಸುಲೈಮಾನ್ ಫೈಝಿ ಕಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು .
ಸಿರಾಜುದ್ದೀನ್ ಫೈಝಿ ಮಾಡನ್ನೂರು ಸ್ವಾಗತಿಸಿ , ರಿಯಾಝ್ ಫೈಝಿ ಪಟ್ಟೆ ನಿರೂಪಿಸಿ , ಅಹ್ಮದ್ ನಯೀಂ ಫೈಝಿ ವಂದಿಸಿದರು . ಮುಖ್ಯ ಅತಿಥಿಗಳಾಗಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ,ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ , ಪ್ರಧಾನ ಕಾರ್ಯದರ್ಶಿ ಹಾಜಿ ಯಾಕೂಬ್ ಖಾನ್ ಬಪ್ಪಳಿಗೆ , ಎಸ್ ವೈ ಎಸ್ ಪುತ್ತೂರು ವಲಯ ಅಧ್ಯಕ್ಷರಾದ ಅಬೂಬಕ್ಕರ್ ಮುಲಾರ್ , ಜನತಾ ಸ್ಸ್ಕೇಲ್ ಬಝಾರ್ ಮಾಲಕ ಅಬ್ದುಲ್ ರಝಾಕ್ ಹಾಜಿ , ಪಿ.ಬಿ ಅಬ್ದುಲ್ಲ ಹಾಜಿ ಬಪ್ಪಳಿಗೆ , ಇಬ್ರಾಹಿಂ ಮುಸ್ಲಿಯಾರ್ ಸಾಲ್ಮರ ,ಅಬ್ದುಲ್ ರಝಾಕ್ ಬನ್ನೂರು. ಮೊದಲಾದವರು ಉಪಸ್ಥಿತರಿದ್ದರು . ಸರಕಾರದ ಕೋವಿಡ್ ನಡಾವಳಿಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರಂತೆ ಸ್ಥಳೀಯರು ಹಾಗೂ ಫೈಝೀಸ್ ಸದಸ್ಯರು ಭಾಗವಹಿಸಿ, ಕಾರ್ಯಕ್ರಮ ವಿಜಯಕ್ಕೆ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.