(www.vknews.com) : ಇಲ್ಲಿ ಲಾಕ್ ಡೌನ್ ಆದರೇನಂತೆ?
ಸೂರ್ಯನ ಬೆಳಕು ಇದೆ. ಚಂದ್ರನ ತಂಪು ಇದೆ. ಉಸಿರಾಡಲು ಗಾಳಿ ಇದೆ. ತಿನ್ನುವ ಆಹಾರವಿದೆ. ಸುತ್ತಮುತ್ತ ಪರಿವಾರವಿದೆ. ಮೊಬೈಲ್ ನೆಟ್ ವರ್ಕ್ ಇದೆ. ಇಲ್ಲದ್ದು ಕೇವಲ ಸುತ್ತಾಡುವ ಸ್ವಾತಂತ್ರ್ಯ. ಎಷ್ಟೊಂದು ಕಷ್ಟವಾಗುತ್ತಿದೆ? ಬದುಕು ಬರಡಾಗಿದೆ. ಜೀವನ ಉತ್ಸಾಹ ಕುಂದಿದೆ. ಇದು ದುನಿಯಾದ ತಾತ್ಕಾಲಿಕ ಲಾಕ್ ಡೌನ್!!!
ಸೂರ್ಯನ ಬೆಳಕಿಲ್ಲ. ಚಂದ್ರನ ತಂಪಿಲ್ಲ. ಉಸಿರಾಡಲು ಗಾಳಿಯಿಲ್ಲ. ಸುತ್ತಲೂ ಯಾರೂ ಇಲ್ಲ. ಜನ್ಮ ಕೊಟ್ಟವರು ಇಲ್ಲ. ನಮ್ಮಿಂದ ಜನಿಸಿದವರು ಇಲ್ಲ. ಬಂಧು ಬಳಗವಿಲ್ಲ. ಎಲ್ಲೆಡೆ ಕತ್ತಲೆ, ಏಕಾಂತ. ಸಂಪೂರ್ಣ ಬಂಧನ. ಇದುವೇ ಖಬರಿನ ದೀರ್ಘಾವಧಿ ಲಾಕ್ ಡೌನ್
ಖಬರ್ ನಮ್ಮನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡು ಹಾಕುವ ಲಾಕ್ ಈ ಲಾಕ್ ಡೌನ್ ಗಿಂತಲೂ ಭಯಾನಕ !!!
ಬಹುಶಃ ದುನಿಯಾದ ಈ ಲಾಕ್ ಡೌನ್ ನಾಳೆ ಖಬರಿನ ಲಾಕ್ ಡೌನಿಗೆ ತಯಾರಿಯ ಪಾಠವೇ?
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.