(www.vknews.com) : ನಮ್ಮ ದೇಶದ ತೀರ್ಥ ಕ್ಷೇತ್ರದ ಬಗ್ಗೆ ಮಾತನಾಡಬೇಕಾದರೆ, ನಮ್ಮ ದೇಶದ ಉತ್ತರ ಭಾರತವು ತನ್ನ ನದಿ, ತೀರ್ಥ ಕ್ಷೇತ್ರ, ಪುರಾತನ ಸನಾತನ ದೇವಾಲಯಗಳು, ಹಿಮಾವೃತ ಬೆಟ್ಟಗಳು, ಜಲಪಾತಗಳು, ಸ್ಮಾರಕಗಳು, ಪ್ರಕೃತಿ ಮೀಸಲು ಗಳು ಮತ್ತು ಆಹ್ಲಾದಕರ ಭಾರತೀಯ ಪಾಕಪದ್ಧತಿಗೆ ಬೇಡಿಕೆಯ ಪ್ರದೇಶಗಳಲ್ಲಿ ಒಂದಾಗಿ ಹೊರಹೊಮ್ಮುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಆಧ್ಯಾತ್ಮಿಕತೆಯ ಸಾಧನೆ ಹುಡುಕುತ್ತಿರುವವರಿಗೆ ಉತ್ತರ ಭಾರತವು ಅತ್ಯಂತ ಬೇಡಿಕೆಯ ಆಕರ್ಷಕ ಸಿದ್ಧಿ ಸಾಧನ ಕ್ಷೇತ್ರಗಳಿಂದ ಕೂಡಿವೆ. ಹಬ್ಬದ ಸಾಲುಗಳು ಇರುವುದರಿಂದ, ಸಂತೋಷ, ಶಾಂತಿ ಮತ್ತು ಪ್ರಶಾಂತತೆಯನ್ನು ಹುಡುಕುತ್ತಾ ಆ ದೈವಿಕ ಪ್ರವಾಸವನ್ನು ತೆಗೆದುಕೊಳ್ಳಲು ಉತ್ತಮ ಸಮಯ ಯಾವುದು! ಈ ಬಗ್ಗೆ ತಿಳಿಯೋಣ ಬನ್ನಿ.
ಉತ್ತರ ಭಾರತವು ಮೇಲೆ ತಿಳಿಸಿದಂತೆ ಎಲ್ಲಾ ವರ್ಗದವರೂ ಭೇಟಿ ನೀಡಲೇ ಬೇಕಾದ ಅಸಂಖ್ಯಾತ ದೇವಾಲಯಗಳ ನೆಲೆಯಾಗಿದೆ, ಅವುಗಳ ಆಕರ್ಷಕ, ದೈವದತ್ತವಾದ ಆಶ್ಚರ್ಯ ಚಕಿತ ಗೊಳಿಸುವ ಕೆತ್ತನೆ, ವಾಸ್ತುಶಿಲ್ಪಗಳು, ಆಕರ್ಷಕ ಇತಿಹಾಸ, ಉತ್ಕಟ ನಂಬಿಕೆ ಮತ್ತು ನಂಬಲಾಗದ ರಹಸ್ಯಗಳಿಗೆ ಹೆಸರು ವಾಸಿಯಾಗಿದೆ. ನೀವು ನಿಜವಾಗಿಯೂ ಆಧ್ಯಾತ್ಮಿಕ ವಿರಾಮವನ್ನು ಬಯಸುತ್ತಿದ್ದರೆ,ಈ ಋತುವಿನಲ್ಲಿ ಭೇಟಿ ನೀಡಬೇಕಾದ ಉತ್ತರ ಭಾರತದ ಕೆಲವು ವಿಶ್ವಪ್ರಸಿದ್ಧ ದೇವಾಲಯಗಳಿಗೆ ನೀವು ಭೇಟಿ ನೀಡಲೇ ಬೇಕು.
ಗೋಲ್ಡನ್ ಟೆಂಪಲ್, ಅಮೃತಸರ:
ಇದು ಉತ್ತರ ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ, ಮತ್ತು ಸಿಖ್ಖರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಆದಾಗ್ಯೂ, ಪ್ರತಿಯೊಂದು ಧರ್ಮದ ಜನರು ವರ್ಷದ ಪ್ರತಿದಿನ ಈ ದೇವಾಲಯಕ್ಕೆ ಬರುತ್ತಾರೆ. ಸಾರ್ಥಕತೆಯನ್ನು ಮೆರೆಯುತ್ತಾರೆ. ಈ ಸ್ವರ್ಣ ಮಂದಿರವನ್ನು 1574ರಲ್ಲಿ ಸಿಖ್ ಗುರು, ಗುರು ರಾಮ್ ದಾಸ್ ಸ್ಥಾಪಿಸಿದರು. ಗುರು ಗ್ರಂಥ ಸಾಹಿಬ್ ಹಾಜರಿದ್ದು ದಿನವಿಡೀ ದೇವಾಲಯದ ಆವರಣದಲ್ಲಿ ಧರ್ಮ ಗ್ರಂಥ ಪಠಿಸುತ್ತಿರುತ್ತಾರೆ. ಈ ಸ್ಥಳಕ್ಕೆ ಎಲ್ಲ ಜಾತಿ, ಧರ್ಮದ ಭಕ್ತರು ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯವು ಬರುವ ಭಕ್ತರಿಗೆ ದಿನವಿಡೀ ಪ್ರಸಾದ ರೂಪದ ಊಟವನ್ನು ನೀಡಲು, ಸಮುದಾಯ ದೊಡ್ಡ ಅಡುಗೆ ಮನೆಯನ್ನು ಸಹ ಹೊಂದಿದೆ. ದೇವಾಲಯದ ವಿಶಿಷ್ಟ ರೀತಿಯ ‘ಲಂಗರ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇಲ್ಲಿ ಪ್ರಸಾದ – ಆಹಾರವನ್ನು ಪ್ರತಿದಿನ ಲಕ್ಷಗಟ್ಟಲೆ ಜನರು ಬಂದು ಸೇವಿಸುತ್ತಾರೆ. ಸ್ವಯಂಸೇವಕರು ತಾವು ಬಯಸಿದಷ್ಟು ಕಾಲ ತಮ್ಮ ಹೃದಯದಿಂದ ಸಂಪೂರ್ಣ ಸಾತ್ವಿಕತನದಿಂದ ಈ ದೇವಾಲಯದ ಅಡುಗೆಮನೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಸ್ವಾಗತಿಸಲಾಗುತ್ತದೆ. ಈ ದೇವಾಲಯವು “ಅಮೃತಸರೋವರ್” ನಿಂದ ಸುತ್ತುವರೆದಿದೆ, ಇದು ತನ್ನ ಗುಣಪಡಿಸುವ ಶಕ್ತಿಗೆ ಹೆಸರುವಾಸಿಯಾಗಿದೆ ಮತ್ತು ಅದೇ ಕಾರಣಕ್ಕಾಗಿ ಪ್ರಪಂಚದಾದ್ಯಂತ ಈ ಮಂದಿರ ಪ್ರಸಿದ್ಧವಾಗಿದೆ. ಈ ದೇವಾಲಯದ ಒಂದು ಸಾರ್ವತ್ರಿಕ ನಿಯಮವೆಂದರೆ ದೇವಾಲಯದ ಆವರಣದಲ್ಲಿ ಭಕ್ತರು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು. ಇದು ಇಲ್ಲಿನ ಧಾರ್ಮಿಕ ನಿಯಮ-ಸಂಪ್ರದಾಯ.
ಅಮರನಾಥದೇವಾಲಯ, ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ):
ಅಮರನಾಥ ದೇವಾಲಯವು ಶಿವನ ಸನ್ನಿಧಾನವಾದ ದೇವಾಲವಾಗಿದ್ದು, ಶಿವನಿಗೆ ಸಮರ್ಪಿತವಾದ ಉತ್ತರ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾಗಿದೆ. ಶಾಸ್ತ್ರಗಳ ಪ್ರಕಾರ, ಅಮರನಾಥವು ಶಿವನಿಗೆ ಭೂಮಿಯ ನೆಲೆಯಾಗಿತ್ತು. ಶಿವನು ಸೃಷ್ಟಿ ಮತ್ತು ಅಮರತ್ವದ ರಹಸ್ಯವನ್ನು ಹಂಚಿಕೊಳ್ಳಲು, ಪಾರ್ವತಿ ದೇವಿಯೊಂದಿಗೆ ಗುಹೆಯನ್ನು ಪ್ರವೇಶಿಸುತ್ತಾನೆ ಎಂದು ನಂಬಲಾಗಿದೆ. ಪ್ರತಿ ವರ್ಷ ಜುಲೈ ನಿಂದ ಆಗಸ್ಟ್ ತಿಂಗಳುಗಳಲ್ಲಿ 45 ದಿನಗಳಲ್ಲಿ ಭಕ್ತರು ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಈ ಸಮಯವನ್ನು ಸಾಮಾನ್ಯವಾಗಿ ‘ಶ್ರಾವಣ ಮೇಳ’ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,900 ಮೀಟರ್ ಎತ್ತರದಲ್ಲಿದೆ. ವಾಸ್ತವವಾಗಿ, ಅಮರನಾಥವು ಹಿಮದಿಂದ ‘ಶಿವ ಲಿಂಗ’ ವನ್ನು ನೈಸರ್ಗಿಕವಾಗಿ ರೂಪಿತವಾಗಿರುವುದಕ್ಕಾಗಿ ಹೆಸರು ವಾಸಿಯಾಗಿದೆ. ‘ಶಿವ ಲಿಂಗ’ ಹಿಂದೂಗಳಿಗೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳು, ದೈವತ್ವದ ಸ್ಪರ್ಶ ಇರುವ ಈ ಆವರಣ ಮತ್ತು ಈ ದೇವಾಲಯಕ್ಕೆ ಭಕ್ತರು ಭೇಟಿಕೊಟ್ಟು ಜನ್ಮ ಸಾರ್ಥಕ ಮಾಡಿಕೊಳ್ಳುತ್ತಾರೆ.
ಬದರೀನಾಥ್ ದೇವಾಲಯ, ಬದರೀನಾಥ್ (ಉತ್ತರಾಖಂಡ):
ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯವು ಭಾರತದಲ್ಲಿ ಹಿಂದೂಗಳ 4 ಪವಿತ್ರ ತೀರ್ಥಯಾತ್ರೆಗಳಾದ ‘ಚಾರ್ ಧಾಮ್’ಗಳಲ್ಲಿ ಒಂದಾಗಿದೆ. ಅಲಕಾನಂದ ನದಿಯ ದಡದಲ್ಲಿರುವ ಈ ದೇವಾಲಯವು ಭವ್ಯವಾದ ಬಣ್ಣ ಬಣ್ಣದಿಂದ ಕೂಡಿದ್ದು, ಚಿತ್ರ-ಪರಿಪೂರ್ಣವಾಗಿದೆ. ಭಾರತೀಯರು ಎಲ್ಲಾ ವರ್ಗದವರು, ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಬದರೀನಾಥ್ ವಿಶಿಷ್ಟ ಹಾಗೂ ಸಿದ್ಧಿ ಸಾಧನ ತೀರ್ಥ ಕ್ಷೇತ್ರ ಮತ್ತು ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಬದರೀನಾಥ್ ಸಮುದ್ರ ಮಟ್ಟದಿಂದ 3,100 ಮೀಟರ್ ಎತ್ತರದಲ್ಲಿದೆ. ಇಲ್ಲಿ 3 ಅಡಿಗಿಂತ ಹೆಚ್ಚು ಎತ್ತರವಿರುವ ಭಗವಾನ್ ವಿಷ್ಣುವಿನ ಕಪ್ಪು ಕಲ್ಲಿನ ಪ್ರತಿಮೆಗೆ ಹೆಸರು ವಾಸಿಯಾಗಿದೆ. ಈ ದೇವಾಲಯದಲ್ಲಿ ‘ಮಾತಾ ಮೂರ್ತಿ ಕಾ ಮೇಳ’ ವನ್ನು ಭವ್ಯತೆಯಿಂದ ಆಚರಿಸುತ್ತಾರೆ ಮತ್ತು ಈ ಸಮಯದಲ್ಲಿ ಹೆಚ್ಚು ಜನ ಸಂದಣಿಯನ್ನು ಹೊಂದಿರುತ್ತದೆ. ಇಲ್ಲಿ ಅತೀ ಹೆಚ್ಚು ತಂಡಿ ಇರುವುದರಿಂದ ಅತೀ ಎತ್ತರ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳು ಇರುವುದರಿಂದ ವರ್ಷದಲ್ಲಿ ಕೇವಲ ಆರು ತಿಂಗಳು ಈ ದೇವಾಲಯ ತೆಗೆದಿರುತ್ತದೆ. ಆಗ ಮಾತ್ರ ಇಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತದೆ.
ವೈಷ್ಣೂದೇವಿ ದೇವಾಲಯ, ಜಮ್ಮು:
ವೈಷ್ಣೂದೇವಿ ಉತ್ತರ ಭಾರತದ ಅತ್ಯಂತ ಪ್ರಸಿದ್ಧ ಸ್ವಯಂ ವ್ಯಕ್ತ ಶಕ್ತಿ ದೇವಿಯ ದೇವಾಲಯಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರದಲ್ಲಿರುವ ಗುಹೆಯಲ್ಲಿ ಮುಖ್ಯ ದೇವಾಲಯ ಮತ್ತು ಅದರ ಸುತ್ತಾ ಕೆಲವು ದೇವಾಲಯಗಳಿವೆ. ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಮಾರ್ಗವೆಂದರೆ ಸುಮಾರು ೧೪ ಕಿಲೋಮೀಟರ್ ಗಳ ಸಂಪೂರ್ಣ ಮಾರ್ಗದಲ್ಲಿ ನಡೆಯುವುದು. ಎತ್ತರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ, ದೇವಾಲಯವು ಪ್ರತಿ ವರ್ಷ ೧೦ ದಶಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯದಲ್ಲಿ ದೇವಿಯು ಹುಲಿ ಸವಾರಿ ಮಾಡುತ್ತಾಳೆ, ಎಂಟು ತೋಳುಗಳನ್ನು ಹೊಂದಿದ್ದಾಳೆ, ತ್ರಿಶೂಲ, ಬಿಲ್ಲು, ಬಾಣ, ಕಮಲ, ಗದೆ ಮತ್ತು ಖಡ್ಗವನ್ನು ಹಿಡಿದಿದ್ದಾಳೆ ಮತ್ತು ಇದನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ.
ಮನಸಾ ದೇವಿ ದೇವಾಲಯ, ಹರಿದ್ವಾರ:
ಗಂಗಾ ನದಿಯ ದಡದಲ್ಲಿ ನೆಲೆಗೊಂಡಿರುವ ಹರಿದ್ವಾರ ನಗರದಲ್ಲಿರುವ ಈ ದೇವಾಲಯವು ಉತ್ತರ ಭಾರತದ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಈ ದೇವಾಲಯವನ್ನು ಪವಿತ್ರ ನಗರ ಹರಿದ್ವಾರದ ಐದು ಪ್ರಸಿದ್ಧ ದೇವಾಲಯ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮನಸಾ ಎಂಬ ಪದದ ಅರ್ಥ ‘ಆಶಯ’ ಮತ್ತು ನಂಬಿಕೆಯ ಪ್ರಕಾರ, ಇದು ಪವಿತ್ರ ಸ್ಥಳವಾಗಿದ್ದು, ಇಲ್ಲಿ ಹರಕೆ,ಆಸೆಗಳು, ಕನಸುಗಳು ನನಸಾಗುತ್ತವೆ. ಭಕ್ತ ಯಾತ್ರಾರ್ಥಿಗಳು ಈ ದೇವಾಲಯಕ್ಕೆ ನವರಾತ್ರಿ ಮತ್ತು ಕುಂಭಮೇಳದ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ. ಹಿಂದಿನ ದಿನಗಳಲ್ಲಿ, ಈ ದೇವಾಲಯಕ್ಕೆ ಭೇಟಿ ನೀಡಬೇಕಾದಾಗ ನೂರಾರು ಮೆಟ್ಟಿಲುಗಳನ್ನು ಏರುವ ಮೂಲಕ ಮಾತ್ರ ದೇವಾಲಯವನ್ನು ಪ್ರವೇಶಿಸಬಹುದಾಗಿತ್ತು. ಭಕ್ತರು,ಆಗ ಮಾತ್ರ ಅಕ್ಷರಶಃ, ದೇವಾಲಯದ ಆವರಣಕ್ಕೆ ಭೇಟಿ ನೀಡುವ ಸುಯೋಗವನ್ನು ಗಳಿಸಬೇಕಾಗಿತ್ತು. ಆದಾಗ್ಯೂ, ಇಂದು ಈ ದೇವಾಲಯವನ್ನು ಕೇಬಲ್ ಕಾರ್ ಮೂಲಕ ಬೆಟ್ಟದವರೆಗೆ ಪ್ರವೇಶಿಸಬಹುದು, ಇದು ಭಕ್ತರಿಗೆ ಇಡೀಸುತ್ತಲೂ ಇರುವ ಕಣಿವೆಯ ಮೋಡಿ ಮಾಡುವ ನೋಟವನ್ನು ಒದಗಿಸುತ್ತದೆ.
ಈ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲು ತಾವು ತಂಗಿರುವ ಸ್ಥಳದಿಂದ ಅಥವಾ ಮನೆ ಬಾಗಿಲಿನ ಪಿಕಪ್ ಮತ್ತು ಡ್ರಾಪ್ ನ ಪ್ರಯೋಜನವನ್ನು ಗಮನಿಸಿದರೆ, ಕ್ಯಾಬ್ ಅನ್ನು ಹೊಂದುವುದು ಈ ದೇವಾಲಯಗಳಿಗೆ ಭೇಟಿ ನೀಡಲು ಅನುಕೂಲಕರ ಮಾರ್ಗವಾಗಿದೆ. ನಿಮ್ಮ ಸ್ವಂತ ಪ್ರಯಾಣದ ವೇಳಾಪಟ್ಟಿಯನ್ನು ಹೊಂದಿಸಿದಾಗ, ಆಯ್ಕೆ ಮತ್ತು ದಾರಿಯುದ್ದಕ್ಕೂ ಆಸಕ್ತಿದಾಯಕ ಇತರ ಅಡ್ಡದಾರಿಗಳಲ್ಲಿರುವ ಸಣ್ಣ ಪುಟ್ಟ ಶಕ್ತಿ ಸ್ಥಳಗಳಿಗಿಗೂ ಭೇಟಿ ನೀಡಬೇಕಾದಾಗ ನೀವು ಸವಾರಿಯ ರಸ್ತೆ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರಸ್ತೆ ಪ್ರಯಾಣವು ಪ್ರಯಾಣದ ಮೋಡಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
“ಪ್ರಸ್ತುತ ಸನ್ನಿವೇಶದಲ್ಲಿ ಕಳೆದ ಒಂದೂವರೆ ವರ್ಷದ ನಂತರ, ದೊಡ್ಡ ಸಂಖ್ಯೆಯ ಜನರು ತಮ್ಮ ಧಾರ್ಮಿಕ ಪ್ರಯಾಣ ವಿಹಾರವನ್ನು ಪುನರಾರಂಭಿಸಲು ಉತ್ಸುಕರಾಗಿದ್ದಾರೆ. ಲಸಿಕೆ ಸಂಖ್ಯೆಗಳ ಹೆಚ್ಚಳ ಮತ್ತು ದೇಶೀಯ ಪ್ರಯಾಣದ ಮತ್ತು ತೀರ್ಥ ಕ್ಷೇತ್ರಗಳ ತೆರೆಯುವಿಕೆಯೊಂದಿಗೆ, ಜನಪ್ರಿಯ ಧಾರ್ಮಿಕ ತಾಣಗಳಿಗೆ ನಮ್ಮ ಸವಾರಿ ಕಾರು ಬಾಡಿಗೆ ಬೇಡಿಕೆಯಲ್ಲಿ ಗ್ರಹಿಸಬಹುದಾದ ಏರಿಕೆ ಇದೆ. ನಮ್ಮ ಸೇವೆಯಲ್ಲಿ ನೀಡುವ ಸಂಪೂರ್ಣ ಆರಾಮ ಮತ್ತು ಸುರಕ್ಷತೆಗಾಗಿ ಚಾಲಕ ಚಾಲಿತ ಕ್ಯಾಬ್ ಗಳನ್ನು ಇಷ್ಟಪಡುವ ವೃದ್ಧರು ಮತ್ತು ಕುಟುಂಬ ವರ್ಗಗಳಿಗಾಗಿ ವಿಶೇಷವಾಗಿ ನಾವು ವಿನ್ಯಾಸಗೊಳಿಸಿದ್ದೇವೆ.”, ಎಂದು ಭಾರತದ ಪ್ರಮುಖ ಕ್ಯಾಬ್ ಸೇವಾ ಪೂರೈಕೆದಾರ ಸವಾರಿ ಕಾರ್ ರೆಂಟಲ್ಸ್ ನ ಆನಂದ್ ದೊರೈರಾಜ್ ಹೇಳಿ ನಮ್ಮ ದೇಶದ ತೀರ್ಥ ಕ್ಷೇತ್ರಗಳ ಬಗ್ಗೆ ವಿಶೇಷ ಮಾಹಿತಿ ಕೊಟ್ಟು ಮುಕ್ತಾಯಗೊಳಿಸುತ್ತಾರೆ.
ಲೇಖಕರು: ಆನಂದ್ ದೊರೈರಾಜ್, ವಿಪಿ, ಬೆಳವಣಿಗೆ ಮುಖ್ಯಸ್ಥ, ಸವಾರಿ ಕಾರ್ ರೆಂಟಲ್ಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.