(www.vknews.com) ; ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ, ಇದರ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರವನ್ನು “ಅಶ್ರಫ್ ಜುಮ್ಮಾ ಮಸೀದಿ” ಕುಕ್ಕುಂದೂರು, ಕಾರ್ಕಳ ಇದರ ಆವರಣದಲ್ಲಿ ಆದಿತ್ಯವಾರ ದಿನಾಂಕ 5.12.2021 ರಂದು ಬೆಳಿಗ್ಗೆ ಘಂಟೆ 9.30 ಕ್ಕೆ ಆಯೋಜಿಸಲಾಗಿತ್ತು.
ಇದಕ್ಕೆ ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿ ಇದರ ಸಹಕಾರವಿತ್ತು.
ಕಾರ್ಯಕ್ರಮವು ಅಬ್ದುಲ್ ಖಾದರ್ ಸಅದಿ ಖತೀಬರು ಅಶ್ರಫ್ ಜುಮಾ ಮಸೀದಿ ಇವರ ದುವಾಃದೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು, ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್,ಬೈಲೂರು, ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಡಾ. ರಿಝ್ವಾನ್ ಅಹ್ಮದ್(ಉಪಾಧ್ಯಕ್ಷರು ಸೆಂಟ್ರಲ್ ಕಮಿಟಿ) ರವರು ಮುಖ್ಯ ವಿಷಯಗಳ ಬಗ್ಗೆ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಬ್ದುಲ್ ಹಮೀದ್ ಮೂಡಬಿದ್ರೆ,(ಖಜಾಂಚಿ ಸೆಂಟ್ರಲ್ ಕಮಿಟಿ) ಇಂಜಿನಿಯರ್ ನಾಸಿರ್ ಶೇಖ್ ಬೈಲೂರು,(ಕಾರ್ಯದರ್ಶಿ ಜಾಮಿಯಾ ಮಸೀದಿ, ಬೈಲೂರು)ಹನೀಫ್ (ಅಧ್ಯಕ್ಷರು ಅಶ್ರಫ್ ಜುಮಾ ಮಸೀದಿ, ಕುಕ್ಕುಂದೂರು) ಮನ್ಸೂರ್ ಅಹ್ಮದ್ (ಉಪಾಧ್ಯಕ್ಷರು ಕಾರ್ಕಳ ಘಟಕ) ಅಬ್ದುಲ್ ರಶೀದ್ ಬೈಲೂರು,(ಜಿಲ್ಲಾ ಸದಸ್ಯರು) ಮುಸ್ತಫಾ ಕಾರ್ಕಳ,(ಜಿಲ್ಲಾ ಸದಸ್ಯರು) ಅಹ್ಮದ್ ನಿಟ್ಟೆ(ಜಿಲ್ಲಾ ಸದಸ್ಯರು), ಮುನವ್ವರ್ ಅಜೆಕಾರು (ಸದಸ್ಯರು ಹೆಬ್ರಿ ಘಟಕ), ನೂರ್ ನವಾಝ್, ಬೈಲೂರು, ಅಶ್ರಫ್ ಬೈಲೂರು, ನಾಸಿರುದ್ದೀನ್ ಕುಕ್ಕುಂದೂರು, ಉಪಸ್ಥಿತರಿದ್ದರು.
ಕೊನೆಗೆ ಶಾಕಿರ್ ಹುಸೇನ್, ಬೈಲೂರು, ರವರು ಧನ್ಯವಾದವಿತ್ತರು.ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ,ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.