ಬೆಳ್ತಂಗಡಿ (www.vknews.in) : ಬಂಗೇರುಕಟ್ಟೆ ಜಮಾತ್ ಗೆ ಒಳಪಟ್ಟ ಮರ್ಹೂಮ್ ಜ|| ಬಾಬ್ ಜಾನರ ಕುಟುಂಬಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ಬಂಗೇರಕಟ್ಟೆ ವಲಯ ಸಮಿತಿಯ ವತಿಯಿಂದ ನಿರ್ಮಿಸಲ್ಪಟ್ಡ ಬೈತುರ್ರಹ್ಮ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ಇಂದಿಲ್ಲಿ ನಡೆಯಿತು.
ಬಂಗೇರುಕಟ್ಟೆ ವಲಯ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತರು ತಮ್ಮ ಜಮಾತಿಗೆ ಒಳ ಪಟ್ಟ ಮರ್ಹೂಮ್ ಬಾಬ್ ಜಾನ್ ಕುಟುಂಬದ ದಯನೀಯ ಪರಿಸ್ಥಿತಿ ಕಂಡು ಮನೆ ನಿರ್ಮಿಸಿ ಯತೀಂ ಮಕ್ಕಳ ಕಣ್ಣೀರೊರೆಸುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ ಎಂದು ಅದರ ಗ್ರಹ ಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರು ಭಾಗವಹಿಸಿ ಶುಭ ಹಾರೈಸಿದರು ಮತ್ತು ದೇಶದ ಸರ್ವ ರಾಜಕೀಯ ಪಕ್ಷಗಳಿಗೆ ಮಾದರಿಯಾದ ಸೇವೆ ಕೇರಳ ರಾಜ್ಯ ಮುಸ್ಲಿಂ ಲೀಗಿನ ಬೈತುರ್ರಹ್ಮದ ನಿರ್ಮಾಣದ ಪರಂಪರೆಯನ್ನು ಕರ್ನಾಟಕ ರಾಜ್ಯಕ್ಕೂ ಪ್ರಸರಿಸುವ ಬಂಗೇರುಕಟ್ಟೆ ಲೀಗಿನ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐಯುಎಂಎಲ್ ಮಾಜಿ ಜಿಲ್ಲಾಧ್ಯಕ್ಷರಾದ ಕರೀಮ್ ಕಡಬ, ಕೊಡುಗೈ ದಾನಿ ಜ|| ಹಬೀಬ್ ಸಾಹೇಬ್, ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಟಿ ಯು ಇಸ್ಮಾಯಿಲ್ ಬಿ ಸಿ ರೋಡ್, ಮುಸ್ಲಿಂ ಲೀಗ್ ಜಿಲ್ಲಾ ಕೋಶಾಧಿಕಾರಿ ಹಾಗೂ ಬಂಗೇರಕಟ್ಟೆ ಮುಸ್ಲಿಂ ಲೀಗ್ ಅಧ್ಯಕ್ಷರಾದ ಅಶ್ರಫ್ ಬಂಗೇರುಕಟ್ಟೆ, ಜಿಲ್ಲಾ ಮುಸ್ಲಿಂ ಉಪಾಧ್ಯಕ್ಷರು ಸಯ್ಯದ್ ಪಿಕೆ ಬಂಗೇರಕಟ್ಟೆ, ಬದ್ರಿಯಾ ಜುಮಾ ಮಸೀದಿ ಬಂಗೇರುಕಟ್ಟೆ ಗೌರವಧ್ಯಕ್ಷರಾದ ಎಂಆರ್. ಹೈದರ್, ಮಾಜಿ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡರಾದ ರಹ್ಮಾನ್ ಪಡ್ಪು, ಬದ್ರಿಯಾ ಜುಮಾ ಮಸೀದಿ ಬಂಗೇರಕಟ್ಟೆ ಇದರ ಅಧ್ಯಕ್ಷರಾದ ಸಿರಾಜುದ್ದೀನ್, ಬದ್ರಿಯಾ ಜುಮಾ ಮಸೀದಿ ಬಂಗೇರಕಟ್ಟೆ ಮಾಜಿ ಅಧ್ಯಕ್ಷರಾದ ಯೂಸುಫ್ ಬಳ್ಳಮಂಜ, ಕೆ.ಪಿ. ನಜೀರ್ ಮದನಿ ಅಂಡಾಲ್, ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ನೌಶಾದ್ ಮಲಾರ್, ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ರಾರ್ ಗೂಡಿನ ಬಳಿ, ಜಿಲ್ಲಾ ಮುಸ್ಲಿಂ ಲೀಗ್ ಸದಸ್ಯರುಗಳಾದ ಹಮೀದ್ ಪಿಕೆ ಆಸಿಫ್ ಪಿಕೆ, ಇಕ್ಬಾಲ್ ಕಲ್ಲಗುಡ್ಡೆ, ಮೆಹರಾಝ್ ಬಂಗೇರಕಟ್ಟೆ, ಅಬೂಬಕ್ಕರ್ ಬಂಗೇರಕಟ್ಟೆ, ಅಬ್ದುರ್ರಹ್ಮಾನ್ ಅದ್ದು, ಶಬೀರ್ ಅಝ್ಹರಿ, ರಝಾಕ್ ಪಿ ಕೆ ಮುಂತಾದವರು ಉಪಸ್ಥಿತರಿದ್ದರು. ಇಸ್ರಾರ್ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.