ಅಬುಧಾಬಿ (www.vknews.in) : ಕೆಸಿಎಫ್ ಅಬುಧಾಬಿ ಸಮಿತಿ ವತಿಯಿಂದ ಇತ್ತೀಚೆಗೆ ನಗರದ ಹೊರವಲಯದ ಅಲ್ ಬಾಹ್ಯ ಸಮೀಪದ ಉಮ್ಮಲ್ ಬಸಾತೀನ್ ವಿಹಾರ ಕೇಂದ್ರದಲ್ಲಿ ಸಂಘಟನಾ ಪದಾಧಿಕಾರಿಗಳಿಗಾಗಿ enthrall-22 ಎಂಬ ವೈವಿಧ್ಯಮಯ ಕಾರ್ಯಗಾರ ನಡೆಸಲಾಯಿತು.
ಸಮಾರಂಭವನ್ನು ಕೆಸಿಎಫ್ ರಾಷ್ಟ್ರೀಯ ನೇತಾರ ಕೆ ಹೆಚ್ ಅಹಮದ್ ಸಕಾಫಿ ಉದ್ಘಾಟಿಸಿದರು. ಜನಾಬ್ ಮುಸ್ತಫ ಮಾಸ್ಟರ್ ಸಂಘಟನಾ ಬಾಧ್ಯತೆ ಎಂಬ ವಿಷಯದಲ್ಲಿ ತರಬೇತಿ ನೀಡಿದರು. ದಾವೂದ್ ಮಾಸ್ಟರ್ ಅವರು ಮಾನಸಿಕ ಒತ್ತಡವನ್ನು ನಿಭಾಯಿಸುವ ಕುರಿತು ತರಬೇತಿ ನೀಡಿದರು. ಗುಂಪು ಚರ್ಚೆಯಲ್ಲಿ ಕೆಸಿಎಫ್ ಅಂತಾರಾಷ್ಟ್ರಿಯ ನೇತಾರ ಜನಾಬ್ ಪಿ ಎಂ ಹೆಚ್ ಹಮೀದ್ ಮತ್ತು ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜನಾಬ್ ಇಬ್ರಾಹೀಂ ಸಕಾಫಿ ಬಾಗವಹಿಸಿ ಕಾರ್ಯಕರ್ತರ ಜೊತೆ ಸಂಭಾಷಣೆಗೈದರು.
ಸಂಜೆ ನಡೆದ ಕ್ರೀಡಾ ಚಟುವಟಿಕೆಗಳಿಗೆ ರಾಷ್ಟೀಯ ನೇತಾರ ಹಕೀಂ ತುರ್ಕಳಿಕೆ ಸಾರಥ್ಯ ವಹಿಸಿದ್ದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ನೇತಾರ ಜನಾಬ್ ಹಮೀದ್ ಸಅದಿ, ರಾಷ್ಟೀಯ ಸಮಿತಿಯ ಜನಾಬ್ ಮೂಸಾ ಬಸ್ವರ, ಅಬುಧಾಬಿ ಸಮಿತಿಯ ಅಧ್ಯಕ್ಷ ಮೌಲಾನ ಹಸೈನಾರ್ ಅಮಾನಿ ಮತ್ತಿತರ ಝೋನ್ ಮಟ್ಟದ ನಾಯಕರು ಭಾಗವಹಿಸಿದ್ದರು.
ಆರಂಭದಲ್ಲಿ ಜನಾಬ್ ಕಬೀರ್ ಬಾಯಂಬಾಡಿ ಸ್ವಾಗತಿಸಿ ಉಮರ್ ಈಶ್ವರ ಮಂಗಿಳ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ವಿವಿಧ ವಿಭಾಗಳಲ್ಲಿನ ಸಂಘಟನಾ ಚಟುವಟಿಕೆಗಳಿಗಾಗಿ ವೈಯುಕ್ತಿಕ ಮತ್ತು ಸಾಂಘಿಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸರಣಿಯಂತೆ ನಡೆದ ಕಾರ್ಯಕ್ರಮದಲ್ಲಿ ಫುಡ್ ಕೋರ್ಟ್, ಈಜುಕೊಳ, ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಮತ್ತು ಪ್ರಕೃತಿ ರಮಣೀಯ ದೃಶ್ಯಗಳು ವಿಶೇಷ ಆಕರ್ಷಣೆಯಾದ್ದವು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.