ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) ; ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಸತೀಶ್ ಕೌಶಿಕ್ ಅವರ ಸಾವು ಕೊಲೆ ಎಂದು ಆರೋಪಿಸಲಾಗಿದೆ. ಮುಂಬೈನ ಉದ್ಯಮಿಯೊಬ್ಬರ ಪತ್ನಿ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದಾರೆ.
ಸತೀಶ್ ಕೌಶಿಕ್ ಕಳೆದ ದಿನ ನಿಧನರಾದರು. ಇದಾದ ಬಳಿಕ ಪತಿ ಸತೀಶ್ ಕೌಶಿಕ್ ನನ್ನು 15 ಕೋಟಿ ರೂ.ಗಾಗಿ ಕೊಂದಿದ್ದಾನೆ ಎಂದು ಮಹಿಳೆ ಬಹಿರಂಗ ಪಡಿಸಿದ್ದಾಳೆ. ದೆಹಲಿ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಕೌಶಿಕ್ ಸಾಲವಾಗಿ 15 ಕೋಟಿ ರೂ.ಗಳನ್ನು ಹಿಂತಿರುಗಿಸುವಂತೆ ಕೇಳಿದ ನಂತರ, ಮಾತ್ರೆಗಳನ್ನು ನೀಡಿ ಕೊಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಣ ಹಿಂದಿರುಗಿಸುವುದನ್ನು ತಪ್ಪಿಸಲು ಪತಿ ಮತ್ತು ಆತನ ಸ್ನೇಹಿತರು ಕೌಶಿಕ್ನನ್ನು ಕೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ.
2022ರ ಆಗಸ್ಟ್ನಲ್ಲಿ ಹಣ ವಾಪಸ್ ಕೇಳಿದ್ದ ಕೌಶಿಕ್ ಜತೆ ಜಗಳವಾಡಿದ್ದು, ಕೌಶಿಕ್ನನ್ನು ತೊಲಗಿಸಲು ಯೋಚಿಸುತ್ತಿರುವುದಾಗಿ ಪತಿ ಹೇಳಿದ್ದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಸತೀಶ್ ಕೌಶಿಕ್ ಸಾವಿನಲ್ಲಿ ಅಸಹಜವಾದದ್ದೇನೂ ಇಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಸಾವಿಗೆ ಕಾರಣ ಹೃದಯಾಘಾತ. ಆದರೆ ರಕ್ತ ಪರೀಕ್ಷೆ ಮತ್ತು ಹೃದಯ ಪರೀಕ್ಷೆಯ ಫಲಿತಾಂಶದ ನಂತರವೇ ನಿಖರ ಕಾರಣ ತಿಳಿಯಲಿದೆ.
ಈ ಮಧ್ಯೆ, ಕೌಶಿಕ್ ಅವರ ಕೊನೆಯ ಹೋಳಿ ಪಾರ್ಟಿ ನಡೆದ ಫಾರ್ಮ್ಹೌಸ್ನಿಂದ ಪೊಲೀಸರು ಕೆಲವು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಡ್ರಗ್ಸ್ ಯಾವುದು ಅಥವಾ ಕೌಶಿಕ್ ಸಾವಿಗೆ ಡ್ರಗ್ಸ್ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲ 25 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಫಾರ್ಮ್ ಹೌಸ್ ಹೊಂದಿರುವ ಉದ್ಯಮಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.