(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَا سَعِيدُ بْنُ عُفَيْرٍ، قَالَ حَدَّثَنَا ابْنُ وَهْبٍ، عَنْ يُونُسَ، عَنِ ابْنِ شِهَابٍ، قَالَ قَالَ حُمَيْدُ بْنُ عَبْدِ الرَّحْمَنِ سَمِعْتُ مُعَاوِيَةَ، خَطِيبًا يَقُولُ سَمِعْتُ النَّبِيَّ صلى الله عليه وسلم يَقُولُ ” مَنْ يُرِدِ اللَّهُ بِهِ خَيْرًا يُفَقِّهْهُ فِي الدِّينِ، وَإِنَّمَا أَنَا قَاسِمٌ وَاللَّهُ يُعْطِي، وَلَنْ تَزَالَ هَذِهِ الأُمَّةُ قَائِمَةً عَلَى أَمْرِ اللَّهِ لاَ يَضُرُّهُمْ مَنْ خَالَفَهُمْ حَتَّى يَأْتِيَ أَمْرُ اللَّهِ
5. ಮುವಾವಿಯಾ (ರ) ಉಲ್ಲೇಖದಂತೆ: ಅಲ್ಲಾಹನ ಪ್ರವಾದಿ (ﷺ), ಹೇಳಿದರು “ಅಲ್ಲಾಹನು ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಮಾಡಲು ಬಯಸಿದರೆ, ಅಲ್ಲಾಹನು ಅವನನ್ನು ಧರ್ಮವನ್ನು ಗ್ರಹಿಸುವಂತೆ ಮಾಡುತ್ತಾನೆ. ನಾನು ಕೇವಲ ವಿತರಕನಾಗಿದ್ದೇನೆ, ಆದರೆ ಅನುದಾನವು ಅಲ್ಲಾಹನಿಂದ ಬಂದಿದೆ. (ಮತ್ತು ನೆನಪಿಡಿ) ಈ ರಾಷ್ಟ್ರ (ನಿಜವಾದ ಮುಸ್ಲಿಮರು) ಅಲ್ಲಾಹನ ಬೋಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಲೇ ಇರುತ್ತಾರೆ ಮತ್ತು ಅಲ್ಲಾಹನ ಆದೇಶ (ತೀರ್ಪಿನ ದಿನ) ಸ್ಥಾಪನೆಯಾಗುವವರೆಗೂ ಬೇರೆ ಹಾದಿಯಲ್ಲಿ ಸಾಗುವ ಯಾರಿಂದಲೂ ಅವರಿಗೆ ತೊಂದರೆಯಾಗುವುದಿಲ್ಲ. ” ಅಲ್ಲಾಹುವಿನ ಆಜ್ಞೆಯಂತೆ ನಡಯುವ ವ್ಯಕ್ತಿ ಧರ್ಮ ಪಾಲಕನಾಗುತ್ತಾನೆ ಹಾಗೂ ಅವನ ಕಾರ್ಯದಲ್ಲಿ ಅಲ್ಲಾಹನು ಯಾವುದೇ ಕೊರತೆಯನ್ನು ಮಾಡಲಾರನು. ಅವನ ರಕ್ಷೆ ಅಲ್ಲಾಹನ ಭರವಸೆಯಾಗಿದೆ ಹಾಗೂ ಅವನಿಗೆ ಯಾರಿಂದಲೂ ಏನನ್ನು ಮಾಡಲು ಸಾಧ್ಯವಿಲ್ಲ.
حَدَّثَنَا مُحَمَّدُ بْنُ بَشَّارٍ، قَالَ حَدَّثَنَا يَحْيَى بْنُ سَعِيدٍ، قَالَ حَدَّثَنَا شُعْبَةُ، قَالَ حَدَّثَنِي أَبُو التَّيَّاحِ، عَنْ أَنَسٍ، عَنِ النَّبِيِّ صلى الله عليه وسلم قَالَ ” يَسِّرُوا وَلاَ تُعَسِّرُوا، وَبَشِّرُوا وَلاَ تُنَفِّرُوا
6. ಅನಸ್ ಬಿನ್ ಮಾಲಿಕ್ (ರ) ಉಲ್ಲೇಖದಂತೆ ಪ್ರವಾದಿ (ﷺ), ಹೇಳಿದರು “ಜನರಿಗೆ (ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ) ವಿಷಯಗಳನ್ನು ಸುಗಮಗೊಳಿಸಿ, ಮತ್ತು ಅವರಿಗೆ ಅದನ್ನು ಕಟಿನಗೊಳಿಸದಿರಿ ಮತ್ತು ಅವರಿಗೆ ಒಳ್ಳೆಯ ಸುದ್ದಿ ನೀಡಿ ಮತ್ತು ಅವರನ್ನು (ಇಸ್ಲಾಂ ಧರ್ಮದಿಂದ) ಓಡಿಹೋಗುವಂತೆ ಮಾಡಬೇಡಿ. ನಸೀಹತ್ ಎಂಬುದು ಧರ್ಮವಾಗಿದೆ, ಅದನ್ನು ಸುಗಮಗೊಳಿಸುವುದು ಮತ್ತು ಅದನ್ನು ಎಲ್ಲರಿಗೂ ತಲುಪಿವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.