(www.vknews.com) : ಮುಂಬೈನ ದಾದರನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮನೆ (ರಾಜಗೃಹ) ಮೇಲೆ ಜುನ್ 7 ರಂದು ಕೆಲ ದುಷ್ಕರ್ಮಿಗಳು ದಾಳಿ ಮಾಡಿ ಮನೆಯ ವಸ್ತುಗಳನ್ನು ನಾಶ ಮಾಡಿದ್ದು ದೇಶವೇ ತಲೆತಗ್ಗಿಸುವ ಕೆಲಸವಾಗಿದೆ. ಇಂತಹ ದುಷ್ಕøತ್ಯವನ್ನು ಸಂವಿಧಾನ ಸಂರಕ್ಷಣಾ ಸಮಿತಿ ಖಂಡಿಸುತ್ತದೆ. ಇಂತಹ ಅಮಾನವೀಯ ಘಟನೆ ಮುಂದಿರುವ ದುಷ್ಕರ್ಮಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ದೇಶದ್ರೋಹದ ಪ್ರಕ್ರಿಯೆಯಲ್ಲಿ ಷಡ್ಯಂತ್ರ ರೂಪಿಸಿದವರು ಯಾರೆಂಬ ತನಿಕೆ ನಡೆಸಬೇಕು ಎಂದು ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿಯ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಇತ್ತಿಚಿನ ದಿನಗಳಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಮತ್ತು ಸಂವಿಧಾನದ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮನೆ ಒಬವ್ಯಕ್ತಿಯದಲ್ಲ ಕೋಟ್ಯಾಂತರ ಜನರ ಭಾವನೆ, ಪ್ರೀತಿ ತುಂಬಿದ ಕುಟುಂಬ ಇಂತಹ ಸಾರ್ವಜನಿಕ ಆಸ್ತಿಯ ಮೇಲೆ ಹಲ್ಲೆ ಮಾಡಿ ಸಂವಿಧಾನ ಮತ್ತು ದೇಶಕ್ಕೆ ಅಪಮಾನ ಮಾಡಿದ ದೇಶದ್ರೋಹಿಯ ನಾಗರಿಕತ್ವ ರದ್ದುಗೊಳಿಸಿ ಗಡುಪಾರು ಮಾಡಬೇಕು ಇಲ್ಲ ದೇಶವೇ ಮೆಚ್ಚುವ ಹಾಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇವೆ.
ವಿಧಾನಸೌದ ಬಳಿ ಸಿಕ್ಕ ಮಾನ್ಯ ಸಂಸದರಾ ಶ್ರೀ ಉಮೇಶ ಜಾದವ ಅವರ ಮೂಲಕವು ಮನವಿ ಪತ್ರವನ್ನು ಕೊಡಲಾಯಿತು. ಅಶ್ವಿನಿ ಮದನಕರ : ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕರು, ಪೂಜಾ ಸಿಂಗೆ, ದೀಲಿಪ್ ಕಾಯನಕರ್, ಭವಾನಿಪ್ರಸಾದ, ಉತ್ತಮ ಕಡಗಂಚಿ, ಸಾಯಬಣ್ಣ ಎಂ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.