ದಮ್ಮಾಂ(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತ, ಲೇಖಕ ಇಸ್ಹಾಕ್ ಸಿ.ಐ.ಫಜೀರ್ ಬರೆದ ಪ್ರವಾದಿ ಒಡನಾಟದ ಕೆಲವು ಮಸ್ಜಿದ್ಗಳ ಹೃದ್ಯ ಇತಿಹಾಸವುಳ್ಳ “ಅಲ್ ಮಸಾಜಿದ್” ಎಂಬ ಕೃತಿಯನ್ನು,ಸೆಕ್ಟರ್ ಅಧ್ಯಕ್ಷ,ಉಸ್ತಾದ್ ಹಬೀಬ್ ಮರ್ದಳ ಅವರು ಅನಾವರಣ ಗೊಳಿಸಿ ಶುಭ ಹಾರೈಸಿದರು.
ಅದರಂತೆ, ಅಲ್ ಹಸ್ಸ ದಲ್ಲಿ ಕಳೆದ 26 ವರ್ಷಗಳಿಂದ ಸೂಪರ್ ಬಝಾರ್ ನಡೆಸಿಕೊಂಡು ಬಂದು ಹಲವಾರು ಸಂಘ ಸಂಸ್ಥೆಗಳ ಸಹಾಯಿಯಾಗಿ,ಕೆಸಿಎಫ್ ಅಲ್ ಹಸ್ಸ ಸೆಕ್ಟರ್ನ ಬೆನ್ನೆಲುಬಾಗಿದ್ದ ಧಾರ್ಮಿಕ ಶ್ರದ್ಧಾಳು, ಉದ್ಯಮಿ ಸುಲೈಮಾನ್ ಇಂದ್ರಾಜೆ ಅವರು ಸೌದಿ ಅರೇಬಿಯಾದಿಂದ ಅಂತಿಮ ನಿರ್ಗಮನದಿಂದ ತೆರಳುವುದರಿಂದ ಕೆಸಿಎಫ್ ಅಲ್ ಸೆಕ್ಟರ್ ವತಿಯಿಂದ ಗ್ರಾಂಡ್ ಬೀಳ್ಕೋಡುಗೆ ನಡೆಸಲಾಯಿತು.
ರಜಾವಧಿಯಲ್ಲಿ ತವರಿಗೆ ತೆರಳುತ್ತಿರುವ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಕಾರ್ಯಕರ್ತ ಅಶ್ರಫ್ ಕಟ್ಟದಪಡ್ಪು ಅವರನ್ನು ಕೂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿದಾಯತ್ ಉಸ್ತಾದ್ ಕಟ್ಟದಪಡ್ಪು, ಅಶ್ರು ಬಜ್ಪೆ, ಹೈದರ್ ಬಜ್ಪೆ, ಇಕ್ಬಾಲ್ ಗುಲ್ವಾಡಿ, ಹ್ಯಾರಿಸ್ ಕಾಜೂರು,ಅಬೂಬಕ್ಕರ್ ಕಿಲ್ಲೂರು,.ಅಬ್ದುಲ್ಲಾ ಪುಲಾಬೆ, ಅಬೂಬಕ್ಕರ್ ವಿಟ್ಲ,ಮತ್ತು ಹಮೀದ್ ಕೈರಂಗಳ ಉಪಸಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.