(www.vknews.com) ಕೊಝಿಕ್ಕೋಡ್: ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್ ಡೌನ್ ನಲ್ಲಿ ಹಲವು ವಿಷಯಗಳಲ್ಲಿ ರಿಯಾಯಿತಿ ನೀಡಿದರೂ, ಪ್ರಾರ್ಥನಾಲಯಗಳನ್ನು ತೆರೆಯಲು ಅಗತ್ಯವಾದ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಸಮಸ್ತ ಕೇರಳ ಜಮ್ಇಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಲ್ ಹೇಳಿದ್ದಾರೆ.
ಸಮಸ್ತ ಕೇರಳ ಜಮ್ಇಯತ್ತುಲ್ ಉಲಮಾ ಹಾಗೂ ವಿವಿಧ ಸಂಘಟನೆಗಳ ನೇತಾರರು ಆಗ್ರಹಿಸಿದ ಹೊರತಾಗಿಯೂ ಈ ವಿಷಯವನ್ನು ನಿರ್ಲಕ್ಷಿಸಿರುವುದು ಖೇದಕರ. ಸರ್ಕಾರವು ಶೀಘ್ರವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.