ತಿರುವನಂತಪುರಂ (www.vknews.in) : 19 ವರ್ಷದ ಯುವಕನನ್ನು ಕಡಿದು ಕೊಲೆ ಮಾಡಲಾಗಿದೆ. ತಿರುವನಂತಪುರದ ಕಿಲ್ಲಿಪಾಲಂ ಕರಿಮಠ ಕಾಲೋನಿಯಲ್ಲಿ ಅರ್ಷದ್ (19) ಕೊಲೆಯಾದವರು. ಕೊಲೆಯ ಹಿಂದೆ ನಾಲ್ವರ ಗುಂಪು ಕೈವಾಡವಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಅಪ್ರಾಪ್ತರು ಸೇರಿದ್ದಾರೆ. ಮೃತದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಘಟನೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಕರಿಮಠ ನಿವಾಸಿ ಧನುಷ್ (18) ಬಂಧಿತ ಆರೋಪಿ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಧನುಷ್ ಹೊರತುಪಡಿಸಿ ಉಳಿದವರು ಅಪ್ರಾಪ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.