(ವಿಶ್ವಕನ್ನಡಿಗ ನ್ಯೂಸ್) : ಕೋರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಸ್ತುತ ಮುಕ್ತ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದ್ದು, ಅದರಲ್ಲೂ ರಮಝಾನ್ ಅವಧಿಯಲ್ಲಿ ಸಾಮೂಹಿಕ ಧಾರ್ಮಿಕ ಆರಾಧನೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಡಳಿತ ಮತ್ತು ಸರಕಾರದ ಈ ನಿರ್ಧಾರಕ್ಕೆ ರಾಜ್ಯದ ಸಂಪೂರ್ಣ ಮುಸ್ಲಿಮ್ ಭಾಂದವರು ಬೇಷರತ್ ಬೆಂಬಲ ನೀಡಿ ಸೋಂಕು ನಿಯಂತ್ರಣ ತಡೇಯಲು ಸಂಪೂರ್ಣ ಸಹಕರಿಸಲಾಗಿದೆ.
ಮಸೀದಿ ಕೇಂದ್ರಿತ ರಮಝಾನ್ ತಿಂಗಳ ಆರಾಧನೆಯನ್ನು ಮನೆ ಕೇಂದ್ರಿತವಾಗಿ ಮುಸ್ಲಿಮರು ಪರಿವರ್ತಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯವನ್ನು ಸಂರಕ್ಷಿಸಲು ಸಹಕರಿಸಲಾಯಿತು.
ಈದ್ ಮುಗಿಯುವವರೆಗೂ ಮುಸ್ಲಿಮ್ ಸಮುದಾಯವು ಸಾರ್ವಜನಿಕವಾಗಿ ಬೆರೆಯುವಿಕೆ ಮುಕ್ತವಾಗಲು ನಿರ್ಧರಿಸಿದ ಹೊರತಾಗಿಯೂ ಕೊಡ ಇಂದು ಸರಕಾರವು ಜವುಳಿ ಮತ್ತು ಉಡುಪು ಕೈಗಾರಿಕೋದ್ಯಮಿಗಳ ಹಿತ ಮತ್ತು ಲಾಭ ಕಾಪಾಡುವ ದೃಷ್ಟಿಯಿಂದ ಜನರ ಆರೋಗ್ಯದ ಮೇಲೆ ಚೆಲ್ಲಾಟ ವಾಡಿ ಕೋರೋಣ ಸೋಂಕು ಸಂಪೂರ್ಣ ನಿಯಂತ್ರಣವಾಗದ ಈ ಅವಧಿಯಲ್ಲಿ ಅದರಲ್ಲೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿರುವ ದ.ಕ.ಜಿಲ್ಲೆಯಲ್ಲಿ ಸರಕಾರ ಜನರನ್ನು ಮುಕ್ತವಾಗಿ ಮನೆಯಿಂದ ಹೊರ ಬರಲು ಲಾಕ್ ಡೌನ್ ಸಡಿಲಿಕೆ ಮಾಡುವ ನಿರ್ಧಾರದಲ್ಲಿದೆ. ಸರಕಾರ ಮತ್ತು ಜಿಲ್ಲಾಡಳಿತದ ಈ ನಡೆ ಮುಸ್ಲಿಮ್ ಸಮುದಾಯದ ಜನರು ಈದ್ ಖರೀದಿಗಾಗಿ ಮನೆಯಿಂದ ಹೊರ ಬಂದು, ವಸ್ತ್ರ,ಉಡುಪು ಖರೀದಿಸಿ, ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳ ಅಪಾರ ದಾಸ್ತಾನು ಖಾಲಿಯಾಗಲು ಮತ್ತು ಆ ಮೂಲಕ ಅವರನ್ನು ಓಲೈಸಲು ಉದ್ದೇಶಿಸಿದೆ.
ಮುಸ್ಲಿಮ್ ಸಮುದಾಯ ಮಸೀದಿ ಕೇಂದ್ರಿತ ಆರಾಧನೆಯನ್ನು ಸರಕಾರ ನಿರ್ಭಂದಿಸಿದ್ದು ಈ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿವೆ. ಮುಂಜಾನೆ 7 ರಿಂದ ಸಂಜೆ 7 ರ ತನಕ ಸಾರ್ವಜನಿಕರಿಗೇ ಖರೀದಿಗೇ ಮುಕ್ತ ಅವಕಾಶ ನೀಡುವುದಾದರೇ ಮಸೀದಿಯಲ್ಲಿ ಸಾಮೂಹಿಕ ಆರಾಧನಾ ಕರ್ಮವನ್ನು ಸರಕಾರ ಯಾಕೆ ನಿರ್ಬಂಧಿಸಬೇಕು ?
ಮುಸ್ಲಿಮ್ ಸಮುದಾಯ ಜನರಿಗೆ ಮಸೀದಿ ಕೇಂದ್ರಿತ ಆರಾಧನೆ ವಂಚಿತ ವಾದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮ್ ಕುಟುಂಬಗಳು ಯಾವುದೇ ಕಾರಣಕ್ಕೂ ಈದ್ ಖರೀದಿ ಪ್ರಕ್ರಿಯೆಗೆ ಎಂದಿಗೂ ಸ್ಪಂದಿಸಬಾರದು. ಈ ಬಗ್ಗೆ ಪ್ರತೀ ಜಮಾತ್ ವ್ಯಾಪ್ತಿಯಲ್ಲಿ, ಮಸೀದಿ ಆಡಳಿತ,ಸಂಘಟನೆಗಳು, ಸಂಸ್ಥೆ ಗಳು,ಧಾರ್ಮಿಕ,ಸಾಮಾಜಿಕ ಪ್ರಮುಖರು, ದ್ವನಿ ವರ್ಧಿತ ಘೋಷಣೆ ಮಾಡಿ ನಿರ್ಬಂಧಿಸಿ. ಮಸೀದಿ ಆರಾಧನೆ ಹೊರತಾದ ಯಾವುದೇ ಸಡಗರ ಯುಕ್ತ ಈದ್ ಅನ್ನು ಬೆಂಬಲಿಸದಿರಿ. ಈ ಬಗ್ಗೆ ದ.ಕ.ಜಿಲ್ಲೆಯ ಜನ ಪ್ರತಿನಿಧಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು.
ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಈ ಬಗ್ಗೆ ಸಲಹೆ ನೀಡಬೇಕು. ಜನರ ಮುಕ್ತ ಸಂಚಾರ ಪ್ರದರ್ಶನವಾದರೆ ಮಸೀದಿ ಕೇಂದ್ರಿತ ಆರಾಧನೆ ಯಾವುದೇ ಕ್ಷಣದ ಒಂದು ಶುಭ ಮುಂಜಾನೆ ಆರಂಭವಾಗಲು ಬಹುದು. ಈ ಬಗ್ಗೆ ಸರಕಾರ ಉತ್ತಮ ನಿರ್ಧಾರ ಕೈ ಗೊಳ್ಳುವುದು ಒಳಿತು. ಜನತೆ ಜಾಗೃತರಾಗಬೇಕಾಗಿ ವಿನಂತಿ.
– ಕೆ.ಅಶ್ರಫ್ ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.