(www.vknews.com) : 2006 ನೆಯ ಇಸವಿಯಲ್ಲಿ, ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ಡಾ|ವಿವೇಕ್ ವಾಣಿಯವರು ಕುವೈತ್ ಕನ್ನಡ ಕೂಟದ ಅಧ್ಯಕ್ಷರಾಗಿದ್ದು, ರಾಜ್ಯೋತ್ಸವ ಆಚರಣೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದವರು ’ನಿತ್ಯೋತ್ಸವ’ ಕವಿ, ನಾಡೋಜ, ನಿಸಾರ್ ಆಹಮ್ಮದ್.
ಮೈಸೂರು ಅರಮನೆಯ ಅದ್ಭುತವಾದ ರಂಗಹಿನ್ನೆಲೆಯ ವೇದಿಕೆಯಲ್ಲಿ ಕೂಟದ ಸದಸ್ಯರು ನೆಡೆಸಿದ ಸಂಗೀತ, ನೃತ್ಯ, ಜನಪದ ನೃತ್ಯ, ನಾಟಕ, ರೂಪಕ, ಯಕ್ಷಗಾನ ಕಂಡು ಭಾರತದ ರಾಯಭಾರಿ ಮತ್ತು ನಿಸಾರ್ ಆಹಮ್ಮದ್ ರಿಂದ ಕುವೈತ್ ಕನ್ನಡ ಕೂಟಕ್ಕೆ ಅಭಿನಂದನೆಗಳ ಸುರಿಮಳೆ.
’ನಿತ್ಯೋತ್ಸವ’ ಕವಿಯಿಂದ ಸ್ಪೂರ್ತಿಗೊಂಡು, 2006 ರ ರಾಜ್ಯೋತ್ಸವ ಸಮಾರಂಭದಂದೆ, ಕುವೈತ್ ಕನ್ನಡ ಕೂಟದ ಕಾರ್ಯಕ್ರಮಗಳ ಸೊಬಗನ್ನು ವಿವರಿಸಿ ಬರೆದು ಅವರಿಗೆ ಅರ್ಪಣೆಗೈದ ಕವನ. ಕವನ ಸ್ವೀಕರಿಸಿ ಓದಿ ನೋಡಿ, ಬಹಳ ಸಂತೋಷದಿಂದ ಆರ್ಶ್ರೀವಾದಕ್ಕಾಗಿ ಬಗ್ಗಿದ ನನ್ನನ್ನು ಎತ್ತಿ ಹಿಡಿದು ಒತ್ತಿಕೊಂಡು “ಕನ್ನಡದ ಸೇವೆಗಾಗಿ ಇನ್ನಷ್ಟು ಬರೆದು, ಬಹಳಷ್ಟು ಎತ್ತರಕೆ ಎರು” ಎಂದು ಮನದುಂಬಿ ಹಾರೈಸಿದ್ದರು.
“ಕನ್ನಡಮ್ಮನ ಪ್ರತಿನಿತ್ಯದ ನಿತ್ಯೋತ್ಸವಕ್ಕೆ ಮತ್ತೊಮ್ಮೆ ಹುಟ್ಟಿ ಬರಬಾರದೆ ನಿತ್ಯೋತ್ಸವದ ಕವಿ ನಮ್ಮ ನಿಸಾರ್ ರವರು, ನಿಸಾರ್ ರವರಿಲ್ಲದೆ ಈ ಕನ್ನಡ, ಈ ಕರ್ನಾಟಕ ನಿಸ್ಸಾರವೆನಿಸಿದೆ”
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.