(ವಿಶ್ವ ಕನ್ನಡಿಗ ನ್ಯೂಸ್) : ಕೇಂದ್ರ ಸರ್ಕಾರದಿಂದ ಕೊರೋನ ಸಂಕಷ್ಟದಿಂದ ವಿದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ವಾಪಾಸು ಕರೆತರುವ ವಿಮಾನ ಪ್ರಯಾಣದ ವೇಳಾಪಟ್ಟಿ, ಪ್ರಯಾಣಿಸಲಿರುವ ಸ್ಥಳಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಯುಎಇಯಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಪ್ರಯಾಣ ನಿಗದಿಯಾಗಿಲ್ಲ. ನಾವು ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಗರ್ಭಿಣಿ ಮಹಿಳೆಯರು,ತುರ್ತು ಚಿಕಿತ್ಸೆಗೆ ಹೋಗುವವರ ಮಾಹಿತಿ ಕಲೆಹಾಕಿದ್ದು, 100ಕ್ಕಿಂತಲೂ ಹೆಚ್ಚು ಗರ್ಭಿಣಿ ಸ್ತ್ರೀಯರೇ ಇದ್ದು ಹಾಗೆ ಕೆಲಸ ಕಳೆದುಕೊಂಡ ಅದೆಷ್ಟೋ ಕನ್ನಡ ಕುಟುಂಬಗಳು ಹಾಗೂ ಇತರ ಕನ್ನಡಿಗರು ಮತ್ತು ಕೆಲಸ ಹುಡುಕಲು ಬಂದವರು ಕೆಲಸ ಸಿಗದೆ ಬಹಳ ಕಷ್ಟ ಪಡುತ್ತಿದ್ದಾರೆ,
ಹಾಗಾಗಿ ಯುಎಇಯಿಂದ ಕನಿಷ್ಠ ಒಂದು ವಿಮಾನವನ್ನು ಕರ್ನಾಟಕಕ್ಕೆ ಮೊದಲ ಪಟ್ಟಿಯಲ್ಲಿ ಸೇರಿಸಿ ಜನರನ್ನು ಕಳುಹಿಸಲೇಬೇಕಾದ ತುರ್ತು ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯ ಜೊತೆ ಕೂಡಲೇ ಮಾತನಾಡಿ ಇವರಿಗೆ ಮೊದಲ ವಾರದಲ್ಲಿಯೇ ಪ್ರಯಾಣಿಸಲು ವಿಮಾನ ಸೇವೆ ಅನುವು ಮಾಡಬೇಕಾಗಿ ಸನ್ಮಾನ್ಯ ಮುಖ್ಯಮಂತ್ರಿ ಶ್ರಿ. ಬಿ.ಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ಏನ್ ಆರ್ ಐ ಫೋರಮ್ ಹಾಗು ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಪಧಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಮಸ್ತ ಯುಎಈ ಅನಿವಾಸಿ ಕನ್ನಡಿಗರ ಪರವಾಗಿ ಪ್ರವೀಣ್ ಶೆಟ್ಟಿ/ಅಧ್ಯಕ್ಷರು ಕರ್ನಾಟಕ ಏನ್ ಆರ್ ಐ ಫೋರಮ್
ಸುದೀಪ್ ದಾವಣಗೆರೆ/ಅಧ್ಯಕ್ಷರು ಮಮತಾ ರಾಘವೇಂದ್ರ/ಉಪಾಧ್ಯಕ್ಷರು ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಆಡಳಿತ ಮಂಡಳಿ ಮತ್ತು ಸಮಿತಿ ಸದಸ್ಯರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.