ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಇವರ ಹೆಸರು ಮುಹಮ್ಮದ್ ರಫೀಕ್. ಇದೀಗ ಮಸ್ಕತ್ ನಲ್ಲಿ ಆಯಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಯಾವಾಗಲೂ ಮಂದಹಾಸದಿಂದಲೇ ಮಾತನಾಡುವುದು ಇವರ ಹವ್ಯಾಸ. ಕಾರ್ಕಳ ತಾಲೂಕಿನ ಅಜೆಕಾರ್ ಎಂಬಲ್ಲಿ ಇವರ ವಾಸ. ಇಸ್ಲಾಮೀ ಆಚಾರ, ವಿಚಾರಗಳಲ್ಲಿ ಅಪಾರ ನಂಬಿಕೆ ಹೊಂದಿದವರಾಗಿದ್ದಾರೆ. ಚಾಚೂ ತಪ್ಪದೇ ಇದರ ಪಾಲನೆಯನ್ನೂ ಮಾಡುತ್ತಾರೆ. ಉಲಮಾಗಳು ಹಾಗೂ ಸಂಸ್ಕಾರಯುಕ್ತ ವ್ಯಕ್ತಿಗಳೊಂದಿಗೆ ಅಪಾರ ಸಂಭಂದವನ್ನು ಇಟ್ಟುಕೊಂಡಿರುತ್ತಾರೆ.
ಇವರ ಧರ್ಮನಿಷ್ಠೆ ಹಾಗೂ ಕರ್ಮನಿಷ್ಠೆಯನ್ನು ನೋಡಿ ಕಂಪೆನಿಯೂ ಇವರನ್ನು ಗೌರವಯುತವಾಗಿ ಕಾಣುತ್ತದೆ. ಕಷ್ಟಪಟ್ಟು ದುಡಿಯುವುದು, ಸಹೋದರತೆಯನ್ನು ಬೆಳೆಸುವುದು, ತನ್ನಂತೆ ಇತರರೂ ಆಗಬೇಕೆಂಬ ಅಪಾರ ನಂಬಿಕೆಯನ್ನು ಹೊಂದಿದಂತಹ ಯುವಕ ಇವರು. ಯುವಕರಾಗಿದ್ದುಕೊಂಡು ಯುವಕರಲ್ಲೇ ಮಾತ್ರವಲ್ಲ ಹಿರಿಯರೊಂದಿಗೂ ಉತ್ತಮ ಸಂಭಂಧವನ್ನು ಇರಿಸಿಕೊಂಡಿದ್ದಾರೆ.
ಸಮಾಜ ಸೇವೆಯಲ್ಲಿ ಇವರ ಎತ್ತಿದ ಕೈ. ಲಾಕ್ ಡೌನ್ ನಿಂದಾಗಿ ಮನೆಯಲ್ಲಿದ್ದುಕೊಂಡೇ ಪರಿಸರದ ಸಮುದಾಯ ಬಂಧುಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ಉಲಮಾಗಳೊಂದಿಗೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳುವುದು ಇವರ ಇನ್ನೊಂದು ವಿಶಿಷ್ಟತೆ. ಉರ್ದು, ಹಿಂದಿ, ಇಂಗ್ಲಿಷ್,ಕನ್ನಡ, ತುಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಹಾಗೂ ಸ್ವಲ್ಪ ಮಟ್ಟಿಗೆ ಅರಬೀ ಭಾಷೆಯಲ್ಲೂ ನಿಪುಣತೆಯನ್ನು ಹೊಂದಿದ್ದಾರೆ.
ಲಾಕ್ ಡೌನ್ ಸಡಿಲಗೊಂಡ ನಂತರ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಮಾಡಲು ಕಾತರದಿಂದ ಕಾಯುತ್ತಾ ಇದ್ದರು. ಇದೀಗ 8 ಜೂನ್ ಗೆ ಸರಕಾರದಿಂದ ಅನುಮತಿ ಸಿಕ್ಕಿದ್ದೇ ತಡ, ಮಸೀದಿಯನ್ನು ಮುಂಚಿತವಾಗಿಯೇ ಸ್ವಚ್ಚಗೊಳಿಸಿದ್ದಾರೆ. ವಕ್ಫ್ ಬೋರ್ಡ್ ನ ನಿರ್ದೇಶನದಂತೆ ಮಸೀದಿಯ ಎಲ್ಲಾ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿದ್ದಾರೆ. ನಮಾಝ್ ಗೆ ಬರುವವರಿಗಾಗಿ ಎಲ್ಲಾ ತರಹದ ಬಂದೋಬಸ್ತ್ ಗಳನ್ನು ಮಾಡಿದ್ದಾರೆ.
ಹಾಗೂ ಎಲ್ಲರ ಗಮನಕ್ಕೆ ಬರುವ ಹಾಗೆ ನೋಟೀಸ್ ಬೋರ್ಡ್ ನಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ಪ್ರಕಟಿಸಿದ್ದಾರೆ. ಚಿಕ್ಕ ಮೊಹಲ್ಲವಾದರೂ ಮಸೀದಿಯ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ. ಒಟ್ಟಾರೆಯಾಗಿ ಹೇಳುವುದಾದರೆ ಮಾದರೀ ವ್ಯಕ್ತಿತ್ವವನ್ನು ಹೊಂದಿದ ಯುವಕರಾಗಿದ್ದಾರೆ. ಅಲ್ಲಾಹು ಅವರ ಯೌವ್ವನವನ್ನು ಸ್ವೀಕರಿಸಿ ಇನ್ನಷ್ಟು ಸೇವೆಗಳನ್ನು ಮಾಡುವ ತೌಫೀಕ್ ನೀಡಲಿ.( ಆಮೀನ್). ತಮಗಿಷ್ಟವಾದರೆ ಅವರನ್ನು ಸಂಪರ್ಕಿಸಿ ಶುಭಾಶಯಗಳನ್ನು ಸಲ್ಲಿಸಬಹುದು. ಮೊಬೈಲ್ ಸಂಖ್ಯೆ: 9591965383
ಮೌಲಾನಾ ಅಬ್ದುಲ್ ಹಫೀಝ್ , ಅಲ್ ಕಾಸಿಮೀ, ಕಾರ್ಕಳ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.