ಬೆಂಗಳೂರು (www.vknews.com) : ಚೀನಾ ಗಡಿಯಲ್ಲಿ ನಮ್ಮ ಭೂಪ್ರದೇಶದೊಳಗೆ ನುಗ್ಗಿ ಚೀನಾದ ಸೈನಿಕರು ನಮ್ಮ 20 ಧೀರ ಯೋಧರನ್ನು ಹತ್ಯೆಗಿದ ಚೀನಾ ಕ್ರಮ ವನ್ನು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ತೀವ್ರವಾಗಿ ಖಂಡಿಸದಿದ್ದರೆ.
ನಮ್ಮ ಭೂಪ್ರದೇಶದ ಸುಮಾರು 60ಕಿಲೋಮೀಟರ್ ಚದರ ವಿಸ್ತೀರ್ಣ ಭೂಮಿಯನ್ನು ಆಕ್ರಮಿಸಿ ಒಳನುಗ್ಗಿ ದೇಶ ರಕ್ಷಕರಾದ ನಮ್ಮ 20 ಧೀರ ಯೋದರನ್ನು ಕೊಲ್ಲುವಾಗ ರಾಜಸ್ಥಾನದ ಸರಕಾರವನ್ನು ಅಡಿಮೇಲುಗೊಳಿಸುವುದರಲ್ಲಿ ಮಗ್ನರಾಗಿದ್ದರು ನಮ್ಮ ಪ್ರಧಾನಿಯವರು. ಪ್ರಧಾನಿಯವರಿಗೆ ಚೀನಾದೊಂದಿಗೆ ಸರ್ಜಿಕಲ್ ಸ್ಟ್ರೈಕ್ ಮಾಡುವ 56ಇಂಚಿನ ಎದೆಗಾರಿಕೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು. ಕಳೆದ ಒಂದು ವಾರ ದಲ್ಲಿ ಕೆಲವು ದಿನಗಳಿಂದ ಚೀನಾ , ಪಾಕಿಸ್ತಾ ಮತ್ತು ನೇಪಾಳ ಆಕ್ರಮಣ ನಡೆಸುತ್ತಿರುವಾಗಲೂ ಕೇಂದ್ರ ಸರ್ಕಾರ ಎರಡನೇ ಅವದಿಯ ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದೆ.ಅದೇ ರೀತಿ ಶಾಸಕರನ್ನು ಖರೀದಿಸಿ ಎರಡು ರಾಜ್ಯಸಭೆ ಸದಸ್ಯರನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದು ನಾಚಿಕೆಗೇಡಿನ ವಿಶಯವಾಗಿದೆ ಎಂದು ತಾಹಿರ್ ಹುಸೇನ್ ಹೇಳಿದರು.
ರಾಜಕೀಯ ನಾಯಕರ ಮಕ್ಕಳು ಯೋಧರಾಗುವುದಿಲ್ಲ.ಯೋಧರಾಗುವುದು ಸಾಧಾರಣ ಜನಸಾಮಾನ್ಯರ ಮಕ್ಕಳು,ರೈತರ ಮಕ್ಕಳು,ಕಾರ್ಮಿಕರ ಮಕ್ಕಳಾಗಿದ್ದಾರೆ.ಆದ್ದರಿಂದ ಅವರ ಜೀವದ ಬೆಲೆ ಸರಕಾರಕ್ಕೆ ಗೊತ್ತಿರಲಿ. ಕೇವಲ ಒಂದು ಹೇಳಿಕೆ ಕೊಟ್ಟು ಅಥವಾ ಸಂತಾಪ ಸೂಚಿಸಿ ಕೈಬಿಡುವಂತಹದ್ದಲ್ಲ ಇದು.ಪ್ರತಿಯೊಂದು ಯೋಧರ ಕುಟುಂಬಕ್ಕೂ ಕನಿಷ್ಠ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು.ಅಷ್ಟೇ ಅಲ್ಲ ಚೀನಾದೊಂದಿಗೆ ನಮ್ಮ ಸಂಪೂರ್ಣ ವ್ಯವಹಾರವನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದರು.
ಹುತಾತ್ಮ ಯೋಧರ ಕುಟುಂಬಕ್ಕೆ ಮತ್ತು ನಮಗೆ ಈ ದುಖ:ವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.