ಮೂಡಬಿದ್ರೆ (www.vknews.com) : ಪೆರಾಡಿ ಬದ್ರಿಯ ಜುಮುಅಃ ಮಸ್ಜಿದ್ ನಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೆರಾಡಿ ಬದ್ರಿಯ ಜುಮುಅಃ ಮಸ್ಜಿದ್ ಖತೀಬ್ ಹಾರಿಸ್ ಹನೀಫಿ ಕುಂಡಡ್ಕ ” ಧೀರ ದೇಶಾಭಿಮಾನಿಗಳ ಸುದೀರ್ಘ ಹೋರಾಟದ ಫಲವಾಗಿ 74 ವರ್ಷಗಳ ಹಿಂದೆ ಸ್ವತಂತ್ರ ಗೊಂಡ ಭವ್ಯ ಭಾರತ ದೇಶವು ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿ ಯಿಂದಾಗಿ ನಿರೀಕ್ಷಿತ ಗುರಿಯನ್ನು ತಲುಪಲು ಇನ್ನೂ ವಿಫಲವಾಗಿದೆ. ಭಾರತೀಯ ಸಮುದಾಯದ ಒಗ್ಗಟ್ಟಿನ ಫಲವಾಗಿ ಮರಳಿ ಪಡೆದ ಸ್ವಾತಂತ್ರ್ಯ ಯಾವತ್ತೂ ಪ್ರಹಸನ ವಾಗಬಾರದು.
ಭಾರತಕ್ಕೆ ಶಾಂತಿ ಸೌಹಾರ್ದತೆ,ಸಹಬಾಳ್ವೆ,ಮಾನವ ಐಕ್ಯತೆಯ ಇತಿಹಾಸ ವಿದೆಯೇ ಹೊರತು ಪರಸ್ಪರ ರನ್ನು ಬಡಿದಾಡಿಸಿ ಸ್ವಾರ್ಥ ಮೆರೆದ ಇತಿಹಾಸ ವಿಲ್ಲ. ಸ್ವಾತಂತ್ರ್ಯ ಹೋರಾಟ ರಂಗದಲ್ಲಿ ಸೊತ್ತು,ವಿತ್ತ,ಅಮೂಲ್ಯ ಪ್ರಾಣ ಒತ್ತೆಯಿಟ್ಟು ಧೀರ ದೇಶಾಭಿಮಾನಿಗಳು ತಮ್ಮ ಎಲ್ಲವನ್ನೂ ಅಖಂಡ ಭಾರತ ದೇಶಕ್ಕಾಗಿ ಸಮರ್ಪಿಸಿದ್ದಾರೆ.
ಭಾರತೀಯರಾದ ನಾವೆಲ್ಲರೂ ಈ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಧಕ್ಕೆ ತರದೆ ಅದನ್ನು ಜತನದಿಂದ ಕಾಪಾಡಬೇಕೆಂದು ಅವರು ನಾಗರಿಕ ಸಮಾಜಕ್ಕೆ ಕರೆ ನೀಡಿದರು. ಈ ಸಂಧರ್ಭದಲ್ಲಿ ಸದರ್ ಉಸ್ತಾದರಾದ ರಝಾಖ್ ಹನೀಫಿ ಉಪಸ್ಥಿತಿಯಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.